ವಿವಿಧ ವಿವಿಗಳಿಗೆ ಸಿಂಡಿಕೇಟ್ ಸದಸ್ಯರ ನೇಮಕ

Update: 2019-12-12 15:41 GMT

ಬೆಂಗಳೂರು, ಡಿ.12: ರಾಜ್ಯ ಸರಕಾರವು ವಿವಿಧ ವಿಶ್ವವಿದ್ಯಾಲಯಗಳಿಗೆ ಸರಕಾರದಿಂದ ಸಿಂಡಿಕೇಟ್ ಹಾಗೂ ವಿದ್ಯಾ ವಿಷಯಕ ಪರಿಷತ್ತಿಗೆ ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡಿ ಆದೇಶಿಸಿದೆ.

ಬೆಂಗಳೂರು ವಿವಿಗೆ ಪ್ರೊ.ಟಿ.ವಿ.ರಾಜು, ವಿದೇಯ ಬೆಳಗೋಡೆ ಶ್ರೀಕಂಠ, ಡಾ.ಎಂ.ವಿ.ಆಶಾ, ಗೋಪಿನಾಥ್, ಡಾ.ಗೋವಿಂದರಾಜು, ಪ್ರೇಮ್ ಸೋಹನ್‌ಲಾಲ್‌ರನ್ನು ನೇಮಿಸಲಾಗಿದೆ. ಬೆಂಗಳೂರು ಕೇಂದ್ರ ವಿವಿಗೆ ಕಿರಣ್ ಕುಮಾರ್, ಎಚ್.ಎನ್.ಹರಿಪ್ರಸಾದ್, ಜ್ಯೋತಿ ವಿಜಯ್, ಟಿ.ಎಚ್.ಶ್ರೀನಿವಾಸಯ್ಯ, ಆರ್.ಕೆ.ಚಂದ್ರನಾಥ್, ಥಾಮಸ್ ನೀಲಿಯಾರ್‌ರನ್ನು ನೇಮಿಸಲಾಗಿದೆ.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ರಾಜರೆಡ್ಡಿ, ಅಭಿಷೇಕ್, ಅಶ್ವಿನಿ ಶಂಕರ್, ಸಂತೋಷ್ ರೆಡ್ಡಿ, ದೇವರಾಜ್, ಜೈಜೋ ಜೋಸೆಫ್‌ರನ್ನು ನೇಮಕ ಮಾಡಲಾಗಿದೆ. ಮೈಸೂರು ವಿವಿಗೆ ಪ್ರದೀಪ್ ಕುಮಾರ್ ದೀಕ್ಷಿತ್, ದೊಡ್ಡಾಚಾರಿ, ಸಿಂಧು ಸುರೇಶ್, ಡಾ.ಈ.ಸಿ.ನಿಂಗರಾಜಗೌಡ, ಡಾ.ದಾಮೋದರ್, ಡಾ.ಸೈಯದ್ ಕಾಝಾ ಮೊಹಿದ್ದೀರ್‌ರನ್ನು ಆಯ್ಕೆ ಮಾಡಿ ನೇಮಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News