ದೂರು ನಿರ್ಲಕ್ಷಿಸಿದರೆ ಅಮಾನತು: ಪೊಲೀಸ್ ಆಯುಕ್ತ ಭಾಸ್ಕರ್ ರಾವ್
Update: 2019-12-12 15:43 GMT
ಬೆಂಗಳೂರು, ಡಿ.12: ಠಾಣೆಗೆ ದೂರು ನೀಡಲು ಬರುವವರನ್ನು ನಿರ್ಲಕ್ಷಿಸುವ ಪೊಲೀಸ್ ಸಿಬ್ಬಂದಿ, ಅಧಿಕಾರಿಯನ್ನು ಅಮಾನತು ಮಾಡುವುದಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಾದರೂ ತಮ್ಮ ಸಮಸ್ಯೆ ಹೇಳಿಕೊಳ್ಳಲು ಠಾಣೆಗೆ ಬಂದಾಗ ಪೊಲೀಸರು ಸ್ಪಂದಿಸಬೇಕು. ಯಾವುದೇ ಕಾರಣ ಹೇಳಿ ದೂರು ದಾಖಲಿಸಿಕೊಳ್ಳದೆ ಕಳುಹಿಸುವಂತಿಲ್ಲ ಎಂದರು.
ನೊಂದ ಜನರಿಗೆ ತಮ್ಮ ಠಾಣಾ ವ್ಯಾಪ್ತಿ ಯಾವುದು ಎಂಬುವುದೇ ಗೊತ್ತಾಗುವುದಿಲ್ಲ. ಆದರೆ, ಯಾರೇ ಬಂದರು ಮೊದಲು ದೂರು ದಾಖಲಿಸಿ, ಆನಂತರ, ಸಂಬಂಧಪಟ್ಟ ಠಾಣೆಗೆ ವರ್ಗಾವಣೆ ಮಾಡಬೇಕು ಎಂದು ಹೇಳಿದರು.