ಪ್ರತ್ಯೇಕ ಬಸ್‌ ಪಥ: ಪುನಿತ್‌ ರಾಜ್‌ ಕುಮಾರ್ ರಾಯಭಾರಿ ?

Update: 2019-12-12 16:37 GMT

ಬೆಂಗಳೂರು, ಡಿ.12: ಬಿಎಂಟಿಸಿ, ಬಿಬಿಎಂಪಿ ಹಾಗೂ ಬೆಂಗಳೂರು ನಗರ ಪೊಲೀಸರ ಜಂಟಿ ಸಹಯೋಗದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರತ್ಯೇಕ ಬಸ್‌ ಪಥಕ್ಕೆ ನಟ ಪುನಿತ್ ರಾಜ್‌ಕುಮಾರ್‌ನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಲು ಮಾತುಕತೆ ನಡೆಸಲಾಗಿದೆ. 

ಕಳೆದ ನ.15ರಿಂದ ನಗರದ ಕೆ.ಆರ್,ಪುರಂ ನಿಂದ ವೈಟ್ಫೀಲ್ಡ್ ವರೆಗೆ ಪ್ರತ್ಯೇಕ ಬಸ್‌ಪಥದಲ್ಲಿ ಬಸ್‌ಗಳನ್ನು ಓಡಿಸಲಾಗುತ್ತಿದೆ. ಆದರೆ, ಈ ಪಥದಲ್ಲಿ ನಿರೀಕ್ಷಿಸಿದಂತೆ ಅಷ್ಟು ಜನಪ್ರಿಯವಾಗಿಲ್ಲ. ಈ ಬಗ್ಗೆ ಫೇಸ್ ಬುಕ್ ಹಾಗೂ ವಾಟ್ಸ್ ಆ್ಯಪ್‌ಗಳಲ್ಲಿ ಬಿಎಂಟಿಸಿಯಿಂದ ಜಾಹೀರಾತುಗಳನ್ನು ಮಾಡಿ ಪ್ರಚಾರ ಮಾಡಲಾಗುತ್ತಿದೆ. ಈಗ ಮುಂದುವರೆದ ಭಾಗವಾಗಿ ಕನ್ನಡದ ಜನಪ್ರಿಯ ನಟ ಪುನಿತ್ ರಾಜ್‌ ಕುಮಾರ್‌ನ್ನು ಬಸ್ ಪ್ರಿಯಾರಿಟಿ ಲೇನ್‌ನ ರಾಯಭಾರಿಯಾಗಿ ಮಾಡಲು ಆಯ್ಕೆ ಮಾಡಲಾಗಿದೆ. ಈ ಸಂಬಂಧ ಅವರೊಂದಿಗೆ ಮಾತುಕತೆ ನಡೆಸಿದ್ದು, ಅವರು ಒಪ್ಪಿದರೆ ಈ ಯೋಜನೆ ಯಶಸ್ವಿಯಾಗಲಿದೆ ಎಂದು ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News