ಎಸ್.ಎಂ.ಕೃಷ್ಣ ಮೂಲ ಕಾಂಗ್ರೆಸ್ಸಿಗರಲ್ಲ: ಜೆಡಿಎಸ್ ನಾಯಕ ರಮೇಶ್ ಬಾಬು
Update: 2019-12-25 14:07 GMT
ಬೆಂಗಳೂರು, ಡಿ.25: ಎಸ್.ಎಂ.ಕೃಷ್ಣ ತಮ್ಮ ಆತ್ಮಚರಿತ್ರೆ ಪುಸ್ತಕದಲ್ಲಿ ದೇವೇಗೌಡರು ಕಾಂಗ್ರೆಸ್ ಸೇರಲು ಬಯಸಿದ್ದರು ಎಂದು ಹೇಳಿರುವುದನ್ನು ಶೈಕ್ಷಣಿಕ ಹಿನ್ನೆಲೆಯಲ್ಲಿ ನೋಡಬೇಕಿದೆ. ಈ ದೇಶದ ಸ್ವಾತಂತ್ರ ಚಳವಳಿ ರೂಪಿಸಿದ ಕಾಂಗ್ರೆಸ್, ಬಹುತೇಕ ಪಕ್ಷಗಳಿಗೆ ಮೂಲ ಪಕ್ಷವಾಗಿದೆ. ಎಸ್.ಎಂ.ಕೃಷ್ಣ ಪಿಎಸ್ಪಿ ಪಕ್ಷದವರಾಗಿದ್ದು ಮೂಲ ಕಾಂಗ್ರೆಸ್ಸಿಗರು ಅಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ರಮೇಶ್ ಬಾಬು ಟ್ವೀಟ್ ಮಾಡಿದ್ದಾರೆ.
ಆತ್ಮ ಚರಿತ್ರೆಗಳು ನಮಗೆ ಮಾಹಿತಿ ಜೊತೆಗೆ ದಾರಿದೀಪವಾಗಬೇಕು. ಸತ್ಯವನ್ನು ಮರೆ ಮಾಚುವ ಪುಸ್ತಕವಾಗಬಾರದು. ಎಸ್.ಎಂ.ಕೃಷ್ಣ, ದೇವೇಗೌಡರ ಕುರಿತಾದ ಮಾಹಿತಿ ಸುದ್ದಿ ಆಗಿದೆ. ಕೃಷ್ಣರವರು ಮುಖ್ಯಮಂತ್ರಿಯಾಗಿ 2004ರಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಸೋಲು ಕಂಡಾಯ ಜೆಡಿಎಸ್ ಬೆಂಬಲದೊಂದಿಗೆ ಮುಖ್ಯಮಂತ್ರಿ ಆಗಲು ದೇವೇಗೌಡರ ಮನೆ ಮುಂದೆ ನಿಂತಿದ್ದರು. ಈ ಸತ್ಯ ಅಲ್ಲಿ ದಾಖಲಾಗಲಿ ಎಂದು ಅವರು ತಿಳಿಸಿದ್ದಾರೆ.