ಜೂಜಾಟ: 13 ಮಂದಿಯ ಬಂಧನ, 2.7 ಲಕ್ಷ ರೂ. ಜಪ್ತಿ

Update: 2019-12-25 16:28 GMT

ಬೆಂಗಳೂರು, ಡಿ.25: ಹಣ ಪಣವಾಗಿ ಕಟ್ಟಿಕೊಂಡು ಜೂಜಾಟ ಆಡುತ್ತಿದ್ದ ಆರೋಪದಡಿ 13 ಜನರನ್ನು ಬಂಧಿಸಿದ ಸಿಸಿಬಿ ಪೊಲೀಸರು, 2.7 ಲಕ್ಷ ರೂ. ಜಪ್ತಿ ಮಾಡಿ, ತನಿಖೆ ಕೈಗೊಂಡಿದ್ದಾರೆ.

ಹೆಬ್ಬಾಳದ ನಮಿತಾ ರೆಸಿಡೆನ್ಸಿ ಕಿಂಗ್ಸ್ ಸೂಟ್ಸ್ ಹೊಟೇಲ್ ನ 4ನೆ ಮಹಡಿಯಲ್ಲಿ ಹಣ ಪಣವಾಗಿ ಕಟ್ಟಿಕೊಂಡು ಜೂಜಾಟ ನಡೆಸುತ್ತಿದ್ದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಕೃತ್ಯದಲ್ಲಿ ಭಾಗಿಯಾಗಿದ್ದ ಹೊಟೇಲ್ ನ ಮಾಲಕ ಸುದೀಪ್ ಸಿಂಗ್ ಪರಾರಿಯಾಗಿದ್ದು, ಅವರ ಪತ್ತೆಗೆ ಶೋಧ ನಡೆಸಲಾಗಿದೆ. ಈ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News