ಸ್ಕೂಟರ್ ಢಿಕ್ಕಿ: ಪಾದಚಾರಿ ಸಾವು

Update: 2020-01-24 18:44 GMT

ಬೆಂಗಳೂರು, ಜ.24: ಇಲ್ಲಿನ ಕಾಮಾಕ್ಷಿಪಾಳ್ಯದ ಡಾ.ಸಿದ್ದಯ್ಯ ಪುರಾಣಿಕ್ ರಸ್ತೆಯ ಬಳಿ ರಸ್ತೆ ದಾಟುತ್ತಿದ್ದಾಗ ನೋಂದಣಿಯಾಗದ ಹೊಸ ಸ್ಕೂಟರ್ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿಯೊರ್ವ ಮೃತಪಟ್ಟಿದ್ದಾರೆ.

ಬಸವೇಶ್ವರ ನಗರದ ನಾಗರಾಜ್(75) ಎಂಬುವರು ಮೃತ ಪಾದಚಾರಿ ಎಂದು ತಿಳಿದುಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು, ಸ್ಕೂಟರ್ ಸವಾರನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News