ಕೇವಲ ಭಾಷಣ ಮಾಡುವ ಬದಲು ಸಚಿವ ಸ್ಥಾನ ತ್ಯಾಗ ಮಾಡಿ: ನಾಯಕರಿಗೆ ಬಸನಗೌಡ ಯತ್ನಾಳ್ ಸಲಹೆ

Update: 2020-01-26 12:33 GMT

ವಿಜಯಪುರ, ಜ. 26: ಸಚಿವ ಸಂಪುಟದಲ್ಲಿ ಹೊಸಬರಿಗೆ ಸ್ಥಾನ ನೀಡಬೇಕು. ಅಂದರೆ ಪಕ್ಷದಲ್ಲಿ ಈಗಾಗಲೇ ಹುದ್ದೆ ಅನುಭವಿಸಿದ ನಾಯಕರು ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧರಾಗಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲಹೆ ಮಾಡಿದ್ದಾರೆ.

 ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಸಿ.ಸಿ.ಪಾಟೀಲರನ್ನು ಬಲಿಕೊಟ್ಟು ನಾನು ಸಚಿವನಾಗಲು ಬಯಸುವುದು ಇಲ್ಲ. ರಾಜೀನಾಮೆ ನೀಡಿ ಬಿಜೆಪಿ ಸೇರಿರುವ 17 ಮಂದಿಗೆ ಸ್ಥಾನ ನೀಡಲಾಗುವುದು ಎಂದರು.

ಉಪ ಚುನಾವಣೆಯಲ್ಲಿ ಗೆದ್ದ ಶಾಸಕರಿಗೆ ಹುದ್ದೆ ನೀಡಬೇಕೆಂದರೆ ತ್ಯಾಗ ಅನಿವಾರ್ಯ. ಕೆಲವರು ಪಕ್ಷದಲ್ಲಿ ಸಾಕಷ್ಟು ಹುದ್ದೆ ಅನುಭವಿಸಿದ್ದಾರೆ. ಕೇವಲ ಭಾಷಣ ಮಾಡುವ ಬದಲು ಇಂತಹ ತ್ಯಾಗಕ್ಕೆ ಮುಂದಾಗಬೇಕು. ಡಿಸಿಎಂ ಸ್ಥಾನಗಳನ್ನು ಹೆಚ್ಚಿಸುವುದರಿಂದ ಹುದ್ದೆ ಮೇಲಿನ ಗೌರವ ಕಡಿಮೆಯಾಗಲಿದೆ ಎಂದು ಅವರು ತಿಳಿಸಿದರು.

ಮೌಲ್ಯಮಾಪನ ಅಗತ್ಯ: ಪ್ರತಿ ಮೂರು ತಿಂಗಳಿಗೊಮ್ಮೆ ಹೈಕಮಾಂಡ್, ಸಚಿವರ ಮೌಲ್ಯಮಾಪನ ಮಾಡಬೇಕು. ಅವರಿಗೆ ನೀಡಿರುವ ಗುರಿಯ ಅವಲೋಕನ ಮಾಡಬೇಕು. ಇಲ್ಲದಿದ್ದರೆ ಕೇವಲ ಸ್ಥಾನಕ್ಕೆ ಸೀಮಿತವಾದರೆ ಸಲ್ಲ ಎಂದು ಯತ್ನಾಳ್ ಆಕ್ಷೇಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News