ಗಾಂಧೀಜಿ ಹತ್ಯೆ ಪ್ರಕರಣದ ಮರುತನಿಖೆ ನಡೆಯಲಿ: ಸುಬ್ರಮಣಿಯನ್ ಸ್ವಾಮಿ

Update: 2020-02-16 11:12 GMT

ಹೊಸದಿಲ್ಲಿ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಸಾವಿನ ಬಗ್ಗೆ ಮರುತನಿಖೆ ನಡೆಯಬೇಕೆಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಗಾಂಧಿ ಹತ್ಯೆಯ ಬಗ್ಗೆ ಮರುತನಿಖೆ ನಡೆಯಬೇಕು. ಗಾಂಧೀಜಿಯನ್ನು ಹತ್ಯೆಗೈದದ್ದು ನಾಥೂರಾಮ್ ಗೋಡ್ಸೆ ಹತ್ಯೆಗೈದಿರುವುದಾಗಿ ಸಂಪೂರ್ಣವಾಗಿ ಪ್ರತಿಪಾದಿಸಲು ಸಾಧ್ಯವಿಲ್ಲ ಎಂದಿದ್ದಾರೆ.

"ಮೊದಲನೆ ಪ್ರಶ್ನೆ: ಗಾಂಧೀಜಿ ಮೃತದೇಹದ ಮರಣೋತ್ತರ ಪರೀಕ್ಷೆ ಏಕೆ ನಡೆಸಿಲ್ಲ?, 2: ಅಭಾ ಮತ್ತು ಮನುವನ್ನು ನೇರ ಸಾಕ್ಷಿಯಾಗಿ ಏಕೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿಲ್ಲ?, 3: ಗೋಡ್ಸೆ ಚೇಂಬರ್ ನಲ್ಲಿ ಎಷ್ಟು ಖಾಲಿ ಚೇಂಬರ್ ಗಳಿದ್ದವು?, 4: ಇಟಾಲಿಯನ್ ರಿವಾಲ್ವರ್ 'ಗುರುತಿಸಲಾಗಿಲ್ಲ' ಏಕೆ? ನಾವು ಈ ಪ್ರಕರಣದ ಮರು ತನಿಖೆ ನಡೆಸಬೇಕು" ಎಂದವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News