ಕೇರಳ ಪೊಲೀಸ್ ತರಬೇತಿ ಅಕಾಡೆಮಿ ಮೆನುವಿನಲ್ಲಿ ಬೀಫ್ ಖಾದ್ಯಕ್ಕೆ ಕೊಕ್: ಕಾಂಗ್ರೆಸ್ ಪ್ರತಿಭಟನೆ

Update: 2020-02-19 18:32 GMT

ಕೊಚ್ಚಿ, ಫೆ. 19: ಕೇರಳದ ರಾಜ್ಯ ಪೊಲೀಸ್ ತರಬೇತಿ ಪಡೆಯುವವರ ಮೆನುವಿನಲ್ಲಿ ಬೀಫ್ ಖಾದ್ಯವನ್ನು ಕೈಬಿಟ್ಟ ವರದಿಯ ಮಧ್ಯೆ ಕಾಂಗ್ರೆಸ್ ಕಾರ್ಯಕರ್ತರು ಕೋಝಿಕ್ಕೋಡ್‌ನ ಮುಕ್ಕಾಂ ಪೊಲೀಸ್ ಠಾಣೆಯಲ್ಲಿ ಭೀಪ್ ಕರಿ ಹಾಗೂ ಬ್ರೆಡ್ ವಿತರಿಸಿದ್ದಾರೆ.

ಬೀಫ್ ಕರಿ ಹಾಗೂ ಬ್ರೆಡ್ ವಿತರಣೆಯ ನೇತೃತ್ವವನ್ನು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಕೆ. ಪ್ರವೀಣ್ ಕುಮಾರ್ ವಹಿಸಿಕೊಂಡಿದ್ದರು.

ಆದರೆ, ಈ ವಾರದ ಆರಂಭದಲ್ಲಿ ಕೇರಳ ಪೊಲೀಸ್ ಇಲಾಖೆ, ಹೊಸತಾಗಿ ತರಬೇತಿ ಪಡೆಯುವ ಪೊಲೀಸ್ ತಂಡಗಳು ಮೆನುವಿನಲ್ಲಿ ಬೀಫ್ ಖಾದ್ಯವನ್ನು ಕೈಬಿಡಲಾಗಿದೆ ಎಂಬ ವರದಿ ಆಧಾರ ರಹಿತ ಎಂದು ಹೇಳಿತ್ತು. ಒಂದು ಗುಂಪಿನ ಮಾಧ್ಯಮಗಳು ಮೆನುವಿನಿಂದ ಬೀಫ್ ಖಾದ್ಯವನ್ನು ಕೈಬಿಡಲಾಗಿದೆ ಎಂದು ವರದಿ ಮಾಡಿದ ಬಳಿಕ ಪೊಲೀಸ್ ಇಲಾಖೆ ಈ ಸ್ಪಷ್ಟನೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News