'ಇನ್ಶಾ ಅಲ್ಲಾಹ್ ದಿಲ್ಲಿಯಲ್ಲಿ ಸಂಪೂರ್ಣ ಶಾಂತಿ ನೆಲೆಸಲಿದೆ': ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್

Update: 2020-02-27 05:57 GMT

ಹೊಸದಿಲ್ಲಿ: ಹಿಂಸಾಚಾರಪೀಡಿತ ದಿಲ್ಲಿಯ ಪ್ರದೇಶಗಳಿಗೆ ಭೇಟಿ ನೀಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸ್ಥಳೀಯರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

"ಪರಿಸ್ಥಿತಿ ನಿಯಂತ್ರಣದಲ್ಲಿ. ಜನರು ತೃಪ್ತರಾಗಿದ್ದಾರೆ. ಪೊಲೀಸರು ಅವರ ಕೆಲಸ ಮಾಡುತ್ತಿದ್ದಾರೆ" ಎಂದು ದೋವಲ್ ಹೇಳಿದರು.

ಇದೇ ಸಂದರ್ಭ ಅವರ ಬಳಿಗೆ ಆಗಮಿಸಿದ ಬುರ್ಖಾ ಧರಿಸಿದ್ದ ಮಹಿಳೆಯೊಬ್ಬರು, "ನಾವು ಸುರಕ್ಷಿತವಾಗಿದ್ದೇವೆ ಎಂದು ಅನಿಸುತ್ತಿಲ್ಲ" ಎಂದರು. ಇದಕ್ಕುತ್ತರಿಸಿದ ದೋವಲ್, "ಜನರಲ್ಲಿ ಒಗ್ಗಟ್ಟಿನ ಭಾವನೆಯಿದೆ. ವೈರತ್ವವಿಲ್ಲ. ಕೆಲವು ಕ್ರಿಮಿನಲ್ ಗಳು ಈ ರೀತಿಯ ಕೃತ್ಯಗಳನ್ನು ಎಸಗುತ್ತಿದ್ದಾರೆ. ಪೊಲೀಸರು ಅವರ ಕೆಲಸ ಮಾಡುತ್ತಿದ್ದಾರೆ. ಏನು ನಡೆದಿದೆಯೋ ಅದು ನಡೆದಿದೆ. ಇನ್ ಶಾ ಅಲ್ಲಾಹ್ ಇಲ್ಲಿ ಸಂಪೂರ್ಣ ಶಾಂತಿ ನೆಲೆಸಲಿದೆ. ಯಾರೆಲ್ಲಾ ತಮ್ಮ ದೇಶವನ್ನು, ಸಮಾಜವನ್ನು ಪ್ರೀತಿಸುತ್ತಾರೋ ಎಲ್ಲರೂ ಪ್ರೀತಿ ಸೌಹಾರ್ದದಿಂದ ಬದುಕಬೇಕು" ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News