ರಾಜ್ಯಸಭೆ ಚುನಾವಣೆ: ನಾಮಪತ್ರ ಸಲ್ಲಿಸಿದ ಜ್ಯೋತಿರಾದಿತ್ಯ ಸಿಂದಿಯಾ

Update: 2020-03-13 19:18 GMT

ಭೋಪಾಲ್, ಮಾ. 13: ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂದಿಯಾ ಅವರು ಮಾರ್ಚ್ 26ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಶುಕ್ರವಾರ ನಾಮಪತ್ರ ಸಲ್ಲಿಸಿದರು.

ಜ್ಯೋತಿರಾದಿತ್ಯ ಸಿಂದಿಯಾ ಅವರು ಮಧ್ಯಪ್ರದೇಶದ ಬಿಜೆಪಿ ಕಚೇರಿಯಿಂದ ತೆರಳಿ ರಾಜ್ಯ ವಿಧಾನ ಸಭೆ ಸೆಕ್ರೇಟರಿಯೇಟ್‌ಗೆ ಅಪರಾಹ್ನ 2 ಗಂಟೆಗೆ ತಲುಪಿದರು. ಅಲ್ಲದೆ, ಚುನಾವಣಾ ಅಧಿಕಾರಿ ಹಾಗೂ ವಿಧಾನಸಭಾ ಪ್ರಾಥಮಿಕ ಕಾರ್ಯದರ್ಶಿ ಎ.ಪಿ. ಸಿಂಗ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯ ಬಿಜೆಪಿ ಅಧ್ಯಕ್ಷ ವಿ.ಡಿ. ಶರ್ಮಾ, ನಿರ್ಗಮನ ರಾಜ್ಯಸಭೆ ಸಂಸದ ಪ್ರಭಾತ್ ಝಾ ಹಾಗೂ ಬಿಜೆಪಿಯ ಇತರ ನಾಯಕರು ಉಪಸ್ಥಿತರಿದ್ದರು.

 ಬಿಜೆಪಿ ಕಚೇರಿಗೆ ತೆರಳುವ ಮುನ್ನ ಜ್ಯೋತಿರಾದಿತ್ಯ ಸಿಂದಿಯಾ ಅವರು ತನ್ನ ನಿವಾಸದಲ್ಲಿ ಮಾಜಿ ಸಚಿವ ನರೋತ್ತಮ್ ಮಿಶ್ರಾ ಹಾಗೂ ಪಕ್ಷದ ಇತರ ನಾಯಕರೊಂದಿಗೆ ಭೋಜನ ಸೇವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News