ಜನತಾ ಕರ್ಫ್ಯೂ: ರಾಜ್ಯಪಾಲ ವಜೂಭಾಯಿ ವಾಲಾ ಸಂದೇಶ

Update: 2020-03-21 17:23 GMT

ಬೆಂಗಳೂರು, ಮಾ.21: ರವಿವಾರ(ಮಾ.22) ಪ್ರಧಾನಿಯ ಕೋರಿಕೆಯ ಮೇರೆಗೆ ಎಲ್ಲರೂ ಜನತಾ ಕರ್ಫ್ಯೂನಲ್ಲಿ ಪಾಲ್ಗೊಳ್ಳಬೇಕು ಎಂದು ರಾಜ್ಯಪಾಲ ವಜೂಭಾಯಿ ವಾಲಾ ಮನವಿ ಮಾಡಿದ್ದಾರೆ.

ಬೆಳಗ್ಗೆ 7 ರಿಂದ ರಾತ್ರಿ 9 ರವರೆಗೂ ಜನತಾ ಕರ್ಫ್ಯೂನಲ್ಲಿ ಪಾಲ್ಗೊಳ್ಳುವ ಮೂಲಕ ಸಂಜೆ 5 ಗಂಟೆಗೆ ಎಲ್ಲರೂ ಹೊರಬಂದು ಚಪ್ಪಾಳೆಯನ್ನು ತಟ್ಟಿ ವೈದ್ಯಕೀಯ ಸಿಬ್ಬಂದಿ, ಮಾಧ್ಯಮ, ಸ್ವಚ್ಛತಾ ಸಿಬ್ಬಂದಿ ಸಲ್ಲಿಸುತ್ತಿರುವ ಸೇವೆಗೆ ಧನ್ಯವಾದ ಸಲ್ಲಿಸೋಣ ಎಂದು ರಾಜ್ಯಪಾಲ ಹೇಳಿದ್ದಾರೆ.

ಸಾಮಾಜಿಕ ಗುಂಪಿನಿಂದ ದೂರ ಇರಬೇಕಾಗಿರುವುದು ಮುಖ್ಯವಾಗಿರುತ್ತದೆ ಮತ್ತು ಪರಿಣಾಮಕಾರಿ. ಅಗತ್ಯ ಸಾಮಗ್ರಿಗಳ ಅತಿ ಸಂಗ್ರಹ ಮಾಡುವುದನ್ನು ಬಿಡಬೇಕು. 60-65 ವರ್ಷದ ಹಿರಿಯ ನಾಗರಿಕರು ಮತ್ತು 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿ ಇರುವುದು ಒಳ್ಳೆಯದು. ವ್ಯಾಪಾರಿಗಳು ಮತ್ತು ಶ್ರೀಮಂತರು ಅವರ ಸಿಬ್ಬಂದಿಗಳ ಪಾಲನೆ ಮಾಡುವುದು ಹಾಗೂ ಅವರ ಗೈರು ಹಾಜರಿಗೆ ದಂಡಿಸಬಾರದು. ಸಾಮಾನ್ಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುವುದನ್ನು ಬಿಡಬೇಕು ಎಂದು ಅವರ ಪ್ರಕಟನೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News