ಮೇ 11ರಂದು ಕೊರೋನ ಪರಿಸ್ಥಿತಿಯ ನಂತರದಲ್ಲಿ ಜಾಹಿರಾತು ಮಾರುಕಟ್ಟೆ

Update: 2020-05-05 17:35 GMT

ಬೆಂಗಳೂರಿನ ಆದ್ಯಾ ಕಮ್ಯುನಿಕೇಷನ್ಸ್ ನ ನೇತೃತ್ವದಲ್ಲಿ ಜಾಹಿರಾತು ಮಾರುಕಟ್ಟೆ ಮಾಧ್ಯಮ ಸಂವಹನ ಈ ಕುರಿತ ವೆಬೈನರ್ (ಆನ್ಲೈನ್ ಸಂವಾದ) ಕಾರ್ಯಕ್ರಮ ಮೇ 11 ರಂದು 11 ಗಂಟೆಯಿಂದ 12:30 ರವರೆಗೆ ನಡೆಯಲಿದೆ.

ಕೊರೋನ ಲಾಕ್ ಡೌನ್ ಹಾಗೂ ಮುಂದಿನ ದಿನಗಳಲ್ಲಿ ಜನಾಕರ್ಷಣೆ ಹಾಗು ರಿಟೇಲ್ ಉದ್ಯಮದ ಕುರಿತು ಐದು ಜನ ಅನುಭವಿಗಳು ಮಾತನಾಡಲಿದ್ದಾರೆ. ಸುನಿಲ್ ವಲುಂಜ್ಕರ್, ಬಿ.ಪಿ.ಲ್ , ಟಿ.ವಿ.ಸ್, ಬಜಾಜ್, ಕಿರ್ಲೋಸ್ಕರ್ ಕಂಪೆನಿಗಳಲ್ಲಿ ಸೇವೆ ಸಲ್ಲಿಸಿದವರು.

ಸಮೀರ್, ಆಸ್ಟರ್ ಮಿಮ್ಸ್ ಕ್ಯಾಲಿಕಟ್ ನ್ ವ್ಯವಸ್ಥಾಪಕ ನಿರ್ವಹಣಾಧಿಕಾರಿಯಾಗಿ ಸೇವೆ ಮಾಡಿದವರು. ಆರೋಗ್ಯ ಕ್ಷೇತ್ರದ ಕಾರ್ಯತಂತ್ರದ ನಿಪುಣರು.

ಅಲೆಕ್ಸಿಸ್, ಡೈಜಿವರ್ಲ್ಡ್ ಮಾಧ್ಯಮದ ಆಡಳಿತ ನಿರ್ದೇಶಕರು, ಗಲ್ಫ್ ರಾಷ್ಟ್ರಗಳಲ್ಲಿ ಮಾತು ವಿದೇಶಿ ಕನ್ನಡಿಗರ ಸುತ್ತ ಬೆಳೆದು ಸಂಸ್ಥೆಯನ್ನು ಕಟ್ಟಿದವರು.

ಕೇಶವ ಪ್ರಸಾದ್ ಮುಳಿಯ, ಪ್ರತಿಷ್ಠಿತ ಮುಳಿಯ ಸಂಸ್ಥೆಯ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಹಾಗು ಸಂಸ್ಥೆಯನ್ನು ಉನ್ನತಕ್ಕೆ ಬೆಳೆಸಿದವರು.

ವೇಣು ಶರ್ಮ- ಮೈ ಅಂತರಾತ್ಮ ಸಂಸ್ಥೆಯೊಂದಿಗೆ ಮ್ಯಾನೇಜ್ಮೆಂಟ್ ಹಾಗು ಬಿಸಿನೆಸ್ ಕನ್ಸಲ್ಟಿಂಗ್ ನಲ್ಲಿ 20 ವರ್ಷ ದ ಅನುಭವ ಹೊಂದಿದ್ದು ಕನ್ಸೂಮರ್ ಬೆಹವೀಔರ್ ಭಾಗೇ ಓದಿ ತಿಳಿದವರು.

ಆದ್ಯಾ ಕಮ್ಯುನಿಕೇಷನ್ಸ್ ನ ಚೆಂಗಪ್ಪ ಇವರ ನೇತೃತ್ವದಲ್ಲಿ ನಡೆಯುವ ಈ ಉಚಿತ ವೆಬೈನರ್ ಉಪಯೋಗವನ್ನು ವಿವಿಧ ಕ್ಷೇತ್ರದ ಜನ ಪಡೆಯಬಹುದು . ರಿಜಿಸ್ಟರ್ ಮಾಡಲು http://webinar.aadyaacommunications.com ಎಂದು ಪ್ರಕಟಣೆ ತಿಳಿಸಿದೆ.

For Registration : http://webinar.aadyaacommunications.com

Or mail us @ info@aadyaacommunications.com / 7760119030

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News