ಕರ್ನಾಟಕಕ್ಕೆ ಬರುವ ವಿಮಾನ ಮತ್ತು ರೈಲುಗಳಿಗೆ ನಿಷೇಧ ಹೇರಿಲ್ಲ: ಬಿಎಸ್ ವೈ ಸ್ಪಷ್ಟನೆ

Update: 2020-05-28 18:34 GMT

ಬೆಂಗಳೂರು: ಕರ್ನಾಟಕಕ್ಕೆ ಬರುವ ಯಾವುದೇ ವಿಮಾನ ಮತ್ತು ರೈಲುಗಳಿಗೆ ನಿಷೇಧ ಹೇರಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್,ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಕರ್ನಾಟಕಕ್ಕೆ ಬರುವ ಯಾವುದೇ ವಿಮಾನ ಮತ್ತು ರೈಲುಗಳಿಗೆ ನಿಷೇಧ ಹೇರಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ. ಆದರೆ, ಕೋವಿಡ್ ಗೆ ಸಂಬಂಧಿಸಿದಂತೆ ಹೆಚ್ಚು ಅಪಾಯಕಾರಿ ಸ್ಥಾನದಲ್ಲಿರುವ ರಾಜ್ಯಗಳಿಂದ ಬರುವ ವಿಮಾನಗಳ ಸಂಖ್ಯೆಯನ್ನು ನಿರ್ಬಂಧಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಹಾಗೆಯೇ, ಇದೇ ಅಪಾಯಕಾರಿ ರಾಜ್ಯಗಳಿಂದ ಬರುವ ರಸ್ತೆ ಸಂಚಾರದ ಮೇಲಿನ ಈಗಿನ ನಿರ್ಬಂಧ ಮುಂದುವರಿಸಲಿದ್ದು, ರೈಲುಗಳು ಎಂದಿನಂತೆ ಸಂಚರಿಸಲಿವೆ” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News