ಉಡುಪಿಯಲ್ಲಿ ಮಂಗಳವಾರ 210 ಮಂದಿಯಲ್ಲಿ ಕೊರೋನ ಪ್ರಕರಣಗಳು ದೃಢ: ಆರ್. ಅಶೋಕ್

Update: 2020-06-02 09:00 GMT

ಬೆಂಗಳೂರು: ರಾಜ್ಯದಲ್ಲಿ ಕೊರೋನ ವೈರಸ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ನಡುವೆಯೇ ಇಂದು ಉಡುಪಿ ಜಿಲ್ಲೆಯಲ್ಲಿ 210 ಪ್ರಕರಣಗಳು ಕೊರೋನ ಪಾಸಿಟಿವ್ ಆಗಿದೆ ಎಂದು ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಇಂದು ಉಡುಪಿಯಲ್ಲಿ 210 ಪ್ರಕರಣಗಳು ಕೊರೋನ ಪಾಸಿಟಿವ್ ಆಗಿವೆ. ಮಹಾರಾಷ್ಟ್ರದಿಂದ ಉಡುಪಿಗೆ 20 ಸಾವಿರ ಮಂದಿ ಆಗಮಿಸಿದ್ದಾರೆ. ಮುಂಬೈ, ಪುಣೆಯಿಂದ ಬಂದವರದಲ್ಲಿ ಹೆಚ್ಚಿನ ಪ್ರಕರಣಗಳು ಪಾಸಿಟಿವ್ ಆಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News