ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಪಡೆದಿದ್ದ ಮತ್ತೋರ್ವ ವ್ಯಕ್ತಿ ಗುಣಮುಖ

Update: 2020-06-05 11:57 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.5: ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಪಡೆದಿದ್ದ ಎರಡನೆ ವ್ಯಕ್ತಿ ಗುಣಮುಖರಾಗಿದ್ದು, ಅವರನ್ನು ಐಸಿಯುನಿಂದ ಹೊರಗೆ ಶಿಫ್ಟ್ ಮಾಡಲಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಾಧಿಕಾರಿ ವಿಶಾಲ್‍ ರಾವ್ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಧ್ಯ ವಯಸ್ಕರಾಗಿದ್ದ ವ್ಯಕ್ತಿ ತೀವ್ರವಾದ ಕೊರೋನ ಸೋಂಕಿನಿಂದ ವಿಕ್ಟೋರಿಯಾ ಆಸ್ಪತ್ರೆಯ ಐಸಿಯುನಲ್ಲಿ ಅಡ್ಮಿಟ್ ಆಗಿದ್ದರು. ಅವರಿಗೆ ಡಯಾಬಿಟಿಸ್ ಸಹ ಇತ್ತು. ಮೇ 27ರಂದು ರೋಗಿಗೆ ಕಾನ್‍ವಾಲ್ಸೆಂಟ್ ಪ್ಲಾಸ್ಮಾ ನೀಡಲಾಗಿತ್ತು. ಬಳಿಕ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿತು ಎಂದು ತಿಳಿಸಿದ್ದಾರೆ.

ಸದ್ಯ ವ್ಯಕ್ತಿಯನ್ನು ಕನಿಷ್ಠ ಆಕ್ಸಿಜನ್ ಸಪೋರ್ಟ್‍ನಲ್ಲಿ ಇಡಲಾಗಿದ್ದು, ಗುರುವಾರ ವಾರ್ಡ್‍ಗೆ ಶಿಫ್ಟ್ ಮಾಡಲಾಗಿದೆ. ಅವರು ಸಂಪೂರ್ಣ ಗುಣಮುಖರಾದ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ವಿಶಾಲ್‍ ರಾವ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News