ಬೆಂಗಳೂರು: ರಸ್ತೆ ಅಪಘಾತಕ್ಕೆ ಪತ್ರಕರ್ತ ಬಲಿ

Update: 2020-06-14 12:26 GMT

ಬೆಂಗಳೂರು, ಜೂ.14: ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಪತ್ರಕರ್ತ ಬಾಳೇಕಾಯಿ ನಾಗರಾಜು(55) ಮೃತಪಟ್ಟಿರುವ ಘಟನೆ ಇಲ್ಲಿನ ನೆಲಮಂಗಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾರ್ದನಿ ದಿನಪತ್ರಿಕೆ ಸಂಪಾದಕರೂ ಆಗಿದ್ದ ಬಾಳೇಕಾಯಿ ನಾಗರಾಜು ಅವರು ಶನಿವಾರ ತಡರಾತ್ರಿ ನೆಲಮಂಗಲ-ಸೊಂಡೆಕೊಪ್ಪ ರಸ್ತೆಯ ಭೈರೆಗೌಡನಹಳ್ಳಿ ಬಳಿ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದ.

ಇತ್ತಿಚೆಗೆ ಮಾರ್ದನಿ ಪತ್ರಿಕೆ ವತಿಯಿಂದ ಯುಗಾದಿ ಸಂಚಿಕೆ ಹೊರತಂದಿದ್ದರು, ಈ ಸಂಚಿಕೆಗೆ ಸಹಕರಿಸಿದವರಿಗೆ ಸಂಚಿಕೆ ನೀಡಿ ಕೃತಜ್ಞತೆ ತಿಳಿಸಲು ತೆರಳಿದ ವೇಳೆ ಈ ದುರ್ಘಟನೆ ನಡೆದಿದೆ. ಮೂಲತಃ ನೆಲಮಂಗಲ ಸಮೀಪದ ಕರೆಕಲ್ಲುಪಾಳ್ಯದ ನಿವಾಸಿ ಆಗಿದ್ದ ನಾಗರಾಜು, ನಗರದ ಯಶವಂತಪುರದಲ್ಲಿ ನೆಲೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News