ಚಿಂತೆ ಬಿಟ್ಟು ಆರಾಮವಾಗಿರಿ: ಕ್ವಾರಂಟೈನ್‍ನಲ್ಲಿರುವ ಪೊಲೀಸರಿಗೆ ಧೈರ್ಯ ತುಂಬಿದ ಭಾಸ್ಕರ್ ರಾವ್

Update: 2020-07-11 13:26 GMT

ಬೆಂಗಳೂರು, ಜು.11: ಚಿಂತೆ ಮಾಡಿದರೆ, ದೇಹದಲ್ಲಿ ರೋಧ ನಿರೋಧಕ ಶಕ್ತಿ ಕಡಿಮೆ ಆಗಲಿದೆ. ಹೀಗಾಗಿ, ಯಾವುದೇ ಯೋಚನೆ ಇಲ್ಲದೆ ಎಲ್ಲರೂ ಆರಾಮವಾಗಿರಿ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಶನಿವಾರ ಹೋಟೆಲ್ ಮತ್ತು ಪಿಜಿಗಳಲ್ಲಿ ಕ್ವಾರಂಟೈನ್ ಆಗಿರುವ ಪೊಲೀಸರೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದ ಆಯುಕ್ತರು, ಬಿಸಿ ನೀರು, ಒಳ್ಳೆಯ ಊಟ ಸೇವಿಸಿ ಧ್ಯಾನ ಮಾಡುವಂತೆ ಸಲಹೆ ನೀಡಿದರು.

ಕೋವಿಡ್ ಲಕ್ಷಣಗಳು ನಿಮಗೆ ಇಲ್ಲದೇ ಇದ್ದರೆ ಯಾವುದೇ ಯೋಚನೆ ಮಾಡಬೇಡಿ. ಅನವಶ್ಯಕ ಯೋಚನೆ ಮಾಡಿ ಮನೋಬಲ ಕುಗ್ಗಿಸಬೇಡಿ, ಏನೂ ಆಗುವುದಿಲ್ಲ ಎಂದು ಕ್ವಾರಂಟೈನ್‍ನಲ್ಲಿರುವ 500ಕ್ಕೂ ಹೆಚ್ಚು ಪೊಲೀಸರಿಗೆ ಧೈರ್ಯ ತುಂಬಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News