ಲಾಕ್‍ಡೌನ್: ಲಾಠಿ ಬೀಸಿದ ಮೂವರು ಬಿಬಿಎಂಪಿ ಮಾರ್ಷಲ್‍ಗಳ ಅಮಾನತು

Update: 2020-07-16 12:16 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.16: ಲಾಕ್‍ಡೌನ್ ನಿಯಮ ಉಲ್ಲಂಘಿಸಿದ್ದಾರೆಂದು ಇಬ್ಬರು ವ್ಯಕ್ತಿಗಳ ಮೇಲೆ ಲಾಠಿಯಿಂದ ಹಲ್ಲೆ ನಡೆಸಿದ ಆರೋಪದಡಿ ಮೂವರು ಮಾರ್ಷಲ್‍ಗಳನ್ನು ಅಮಾನತು ಮಾಡಲಾಗಿದೆ.

ಬಿಬಿಎಂಪಿ ಮಾರ್ಷಲ್‍ಗಳಾದ ದೀಪಕ್, ಪವನ್, ದಿನೇಶ್ ನಾಯಕ್ ಎಂಬುವವರನ್ನು ಅಮಾನತು ಮಾಡಲಾಗಿದೆ ಎಂದು ಚೀಫ್ ಮಾರ್ಷಲ್ ರಾಜ್‍ಬೀರ್ ಸಿಂಗ್ ಮಾಹಿತಿ ನೀಡಿದ್ದಾರೆ.

ಇಲ್ಲಿನ ಕೆಆರ್ ಮಾರುಕಟ್ಟೆ ಬಳಿ ಇಬ್ಬರು ವ್ಯಕ್ತಿಗಳ ಮೇಲೆ ಲಾಠಿ ಬೀಸಿದ ಮಾರ್ಷಲ್‍ಗಳು ಲಾಠಿ ಏಟು ನೀಡಿದ್ದಲ್ಲದೆ ಅವರನ್ನು ಮಂಡಿಯೂರಿಸಿ ವಿಡಿಯೊ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಇದನ್ನು ಹಲವು ಮಂದಿ ಖಂಡಿಸಿದ ಹಿನ್ನೆಲೆ ಅವರನ್ನು ಅಮಾನತು ಮಾಡಲಾಗಿದೆ. ಇನ್ನು, ಮಾರ್ಷಲ್‍ಗಳಿಗೆ ದಂಡ ವಿಧಿಸಲು ಮಾತ್ರ ಅವಕಾಶವಿದ್ದು, ಬಲ ಪ್ರಯೋಗಿಸಲು ಅವಕಾಶವಿಲ್ಲ ಎಂದು ರಾಜ್‍ಬೀರ್ ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News