ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ: ನಟಿ ಕಂಗಣ ರಾಣವತ್‌ಗೆ ಸಮನ್ಸ್

Update: 2020-07-24 16:17 GMT

ಮುಂಬೈ, ಜು. 24: ಕಳೆದ ತಿಂಗಳು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮೃತದೇಹ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣದ ಕುರಿತು ಮುಂಬೈ ಪೊಲೀಸರು ನಟಿ ಕಂಗಣ ರಾಣವತ್‌ಗೆ ಸಮನ್ಸ್ ಜಾರಿಗೊಳಿಸಿದ್ದಾರೆ.

ಹೇಳಿಕೆ ದಾಖಲಿಸಲು ಬಾಂದ್ರಾ ಪೊಲೀಸ್ ಠಾಣೆಗೆ ಹಾಜರಾಗುವಂತೆ ಪ್ರಸ್ತುತ ಹಿಮಾಚಲಪ್ರದೇಶದಲ್ಲಿರುವ ನಟಿಗೆ ಸೂಚಿಸಲಾಗಿದೆ. ಜೂನ್ 14ರಂದು ಸುಶಾಂತ್ ಸಿಂಗ್ ರಜಪೂತ್ ಅವರ ಮೃತದೇಹ ಮುಂಬೈಯ ಬಾಂದ್ರಾದಲ್ಲಿರುವ ಅವರ ಅರ್ಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸುಶಾಂತ್ ಸಿಂಗ್ ರಜಪೂತ್ ಮೃತಪಟ್ಟ ಒಂದು ದಿನದ ಬಳಿಕ ಕಂಗಣ ರಾಣವತ್ ಎರಡು ನಿಮಿಷಗಳ ವೀಡಿಯೊ ಬಿಡುಗಡೆ ಮಾಡಿದ್ದರು. ಈ ವೀಡಿಯೊದಲ್ಲಿ ಸುಶಾಂತ್ ಸಿಂಗ್ ಬಗ್ಗೆ ಮಾತನಾಡಿದ್ದರು ಹಾಗೂ ಅವರು ಚಿತ್ರೋದ್ಯಮದ ಸ್ವಜನಪಕ್ಷಪಾತದ ಬಲಿಪಶು ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News