ಬೆಂಗಳೂರು: ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ರಾಷ್ಟ್ರೀಕರಣಕ್ಕೆ ಆಗ್ರಹಿಸಿ ಪ್ರತಿಭಟನೆ

Update: 2020-08-03 17:54 GMT

ಬೆಂಗಳೂರು, ಆ.3: ಕೊರೋನ ಸಂಕಷ್ಟದಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದ ಖಾಸಗಿ ಆಸ್ಪತ್ರೆಗಳನ್ನು ರಾಷ್ಟ್ರೀಕರಣ ಮಾಡಬೇಕು ಎಂದು ಒತ್ತಾಯಿಸಿ ಭಾರತಿ ನಗರ ನಾಗರಿಕರ ವೇದಿಕೆ ವತಿಯಿಂದ ಕಾಕ್ಸ್ ಟೌನ್‍ನ ಡಾ. ರಾಜ್‍ ಕುಮಾರ್ ಪ್ರತಿಮೆ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಕೊರೋನ ಸೋಂಕು ಸಂಕಷ್ಟದ ವೇಳೆಯಲ್ಲಿ ಚಿಕಿತ್ಸೆ ನೆಪದಲ್ಲಿ ಜನರನ್ನು ಸುಲಿಗೆ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕೊರೋನ ಸಂಕಷ್ಟದ ವೇಳೆಯಲ್ಲಿ ಬಡಜನರು, ಜನಸಾಮಾನ್ಯರು ಸುಲಿಗೆಯಲ್ಲಿ ತೊಡಗಿರುವ ಹಾಗು ಚಿಕಿತ್ಸೆ ನೀಡಲು ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಚಿತ್ರ ನಟಿಯರಾದ ಸುಧಾರಾಣಿ ಹಾಗೂ ತಾರಾ ಅನುರಾಧ ಸೇರಿದಂತೆ ಇತರೆ ಸಂಘಟನೆಗಳ ಸದಸ್ಯರು ಹಾಗು ಸ್ಥಳೀಯರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News