ಪ್ರಚೋದನಕಾರಿ ಪೋಸ್ಟ್ ಪ್ರಕರಣ: ಆರೋಪಿ ನವೀನ್‍ಗೆ 14 ದಿನಗಳ ನ್ಯಾಯಾಂಗ ಬಂಧನ

Update: 2020-08-17 15:57 GMT

ಬೆಂಗಳೂರು, ಆ.17: ಕಾವಲ್ ಭೈರಸಂದ್ರ ಗಲಾಟೆ ಪ್ರಕರಣ ಸಂಬಂಧ ಪೊಲೀಸರ ವಿಚಾರಣೆ ಎದುರಿಸುತ್ತಿರುವ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸಹೋದರಿಯ ಪುತ್ರ ಪಿ.ನವೀನ್ ಅನ್ನು 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸೋಮವಾರ ಇಲ್ಲಿನ ವಸಂತಿನಗರದ ಗುರುನಾನಕ್ ಭವನದಿಂದ ವಿಡಿಯೊ ಸಂವಾದ ನಡೆಸಿದ ಪೊಲೀಸರು, 11ನೆ ಎಸಿಎಂಎಂ ನ್ಯಾಯಾದೀಶರ ಮುಂದೆ ಆರೋಪಿಯನ್ನು ಹಾಜರುಪಡಿಸಿದ್ದರು.

ಸದ್ಯ ವಿಚಾರಣೆ ಮುಗಿದಿರುವ ಕಾರಣ ಪೊಲೀಸರು ಪುನಃ ಕಸ್ಟಡಿಗೆ ಕೇಳದೆ ಇರುವ ಹಿನ್ನೆಲೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಲಯ ಆದೇಶಿಸಿತು ಎಂದು ವರದಿಯಾಗಿದೆ. ಸಾಮಾಜಿಕ ಜಾಲತಾಣ ಫೇಸ್‍ಬುಕ್‍ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪದಡಿ ನವೀನ್ ಅನ್ನು ಆ.11ರ ರಾತ್ರಿ ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News