ಸುಶಾಂತ್ ಸಾವು ಪ್ರಕರಣ ಸಿಬಿಐಗೆ: ಅಕ್ಷಯ್ ಕುಮಾರ್, ಕಂಗನಾ ಸ್ವಾಗತ

Update: 2020-08-19 09:00 GMT

ಹೊಸದಿಲ್ಲಿ, ಆ.19: ನಟ ಸುಶಾಂತ್ ಸಿಂಗ್ ರಾಜ್‌ಪೂತ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಬೇಕೆಂದು ಸುಪ್ರೀಂಕೋರ್ಟ್ ಬುಧವಾರ ನೀಡಿರುವ ತೀರ್ಪನ್ನು ನಟರುಗಳಾದ ಅಕ್ಷಯ್ ಕುಮಾರ್,ಕಂಗನಾ ರಣಾವತ್ ಹಾಗೂ ಕೃತಿ ಸನೊನ್ ಸಹಿತ ಇತರರು ಸ್ವಾಗತಿಸಿದ್ದಾರೆ.

ನಟ ಸುಶಾಂತ್ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಡೆದಿರುವ ಅಭಿಯಾನದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸತ್ಯ ಯಾವಾಗಲೂ ಮೇಲುಗೈ ಸಾಧಿಸಲಿ ಎಂದು ಅಕ್ಷಯ ಕುಮಾರ್ ಟ್ವೀಟ್ ಮಾಡಿದ್ದಾರೆ.

ಎಸ್‌ಎಸ್‌ಆರ್ ವಾರಿಯರ್ಸ್‌ಗೆ ಧನ್ಯವಾದಗಳು.ಸಾಮೂಹಿಕ ಪ್ರಜ್ಞೆ ಬಲವಾದ ಶಕ್ತಿ ಇದೇ ಮೊದಲ ಬಾರಿ ಕಾಣಿಸಿತ್ತು. ಮಾನವೀಯತೆ ಗೆದ್ದಿದೆ. ಎಸ್‌ಎಸ್‌ಆರ್ ವಾರಿಯರ್ಸ್‌ನ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಕಂಗನಾ ಟ್ವೀಟಿಸಿದ್ದಾರೆ.

ಸುಶಾಂತ್ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಿಕೊಟ್ಟಿರುವ ಸುಪ್ರೀಂಕೋರ್ಟ್‌ನ ತೀರ್ಪು ಸತ್ಯ ಕೊನೆಗೂ ಮಿಂಚಿದೆ ಎಂಬ ವಿಶ್ವಾಸ ಕಿರಣ ಮೂಡಿಸಿದೆ ಎಂದು ಕೃತಿ ಸನೊನ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News