ಎಎಪಿ ಸರಕಾರದ ವಿರುದ್ಧ ಪ್ರತಿಭಟನೆಗೆ ಕೈಜೋಡಿಸಿ: ದಿಲ್ಲಿ ಬಿಜೆಪಿ ಆಹ್ವಾನ ತಿರಸ್ಕರಿಸಿದ ಅಣ್ಣಾ ಹಝಾರೆ

Update: 2020-08-29 07:42 GMT

 ಹೊಸದಿಲ್ಲಿ, ಆ.29:ಎಎಪಿ ಸರಕಾರದ ವಿರುದ್ಧ ಪ್ರತಿಭಟನೆಗೆ ದಿಲ್ಲಿ ಬಿಜೆಪಿ ಘಟಕ ನೀಡಿರುವ ಆಹ್ವಾನವನ್ನು ತಿರಸ್ಕರಿಸಿರುವ ಸಾಮಾಜಿಕ ಹೋರಾಟಗಾರ ಅಣ್ಣಾ ಹಝಾರೆ, ತನ್ನದೇ ಆದ ಬಲಿಷ್ಟ ಕೇಡರ್‌ನ್ನು ಒಳಗೊಂಡಿರುವ ಹಾಗೂ ಆರು ವರ್ಷಗಳಿಂದ ದೇಶವನ್ನು ಆಳುತ್ತಿರುವ  ಬಿಜೆಪಿ ಪಕ್ಷ ಆಪ್ ಸರಕಾರದ ವಿರುದ್ಧ ಪ್ರತಿಭಟನೆಗೆ ನನ್ನನ್ನು ಆಹ್ವಾನಿಸುತ್ತಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.

ನಾನು ದಿಲ್ಲಿಗೆ ಹೋಗುವುದರಿಂದ ಯಾವುದೇ ಬದಲಾವಣೆಯಾಗುವುದಿಲ್ಲ. ಯಾವುದೇ ಪಕ್ಷಗಳು ದೇಶಕ್ಕೆ ಉಜ್ವಲ ಭವಿಷ್ಯ ನೀಡಬಲ್ಲವು ಎಂಬ ನಂಬಿಕೆಯೂ ನನಗಿಲ್ಲ ಎಂದು ಪತ್ರದಲ್ಲಿ ಅಣ್ಣಾ ಹಝಾರೆ ಹೇಳಿದ್ದಾರೆ.

ದಿಲ್ಲಿ ಬಿಜೆಪಿ ಘಟಕದ ಅಧ್ಯಕ್ಷ ಆದೇಶ್ ಗುಪ್ತಾ ಸೋಮವಾರ ಅಣ್ಣಾ ಹಝಾರೆಗೆ ಪತ್ರ ಬರೆದು ತನ್ನ ಪಕ್ಷ ಎಎಪಿ ಸರಕಾರದ ವಿರುದ್ಧ ನಡೆಸುತ್ತಿರುವ ಬೃಹತ್ ಚಳುವಳಿಗೆ ಕೈಜೋಡಿಸಬೇಕೆಂದು ಕೇಳಿಕೊಂಡಿದ್ದರು.

ದಿಲ್ಲಿಯಲ್ಲಿ 2011ರಲ್ಲಿ ಅಣ್ಣಾ ಹಝಾರೆ ನಡೆಸಿದ್ದ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಕೇಜ್ರಿವಾಲ್ ಕೂಡ ಕೈಜೋಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News