ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಡೆ ವಿಶ್ವಮಾನ್ಯ : ಚಂದ್ರಶೇಖರ ಸ್ವಾಮೀಜಿ

Update: 2020-09-01 11:04 GMT

ಬೆಂಗಳೂರು : ರಾಜಕೀಯದ ಮಾದರಿ ನಾಯಕ, ಅಜಾತಶತ್ರು, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಡೆ ವಿಶ್ವಮಾನ್ಯ. ಇದರಿಂದಾಗಿಯೇ ಅವರಿಗೆ ಭಾರತರತ್ನ ಗೌರವ ದೊರೆತಿದೆ. ಅವರು ಇತರ ರಾಜಕಾರಣಿಗಳಿಗೆ ಮಾದರಿ ಎಂದು ಅಂತಾರಾಷ್ಟ್ರೀಯ ವಾಸ್ತುತಜ್ಞ, ವೈಜ್ಞಾನಿಕ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ಚಂದ್ರಶೇಖರ ಸ್ವಾಮೀಜಿ ಆಶ್ರಯದಲ್ಲಿ ನಡೆದ ಪ್ರಣಬ್ ನಮನ ಕಾರ‍್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಸುಶಿಕ್ಷಿತ, ಸುಸಂಸ್ಕೃತ ವ್ಯಕ್ತಿಗಳು ರಾಜಕಾರಣಕ್ಕೆ ಎಷ್ಟು ಅವಶ್ಯಕ ಎಂಬುದನ್ನು ಪ್ರಣಬ್ ಮುಖರ್ಜಿ ಸಾಬೀತು ಪಡಿಸಿದ್ದಾರೆ. ರಾಜಕೀಯ ತತ್ವ ಸಿದ್ಧಾಂತ ಏನೇ ಇದ್ದರೂ, ಹೇಗೆ ಎಲ್ಲರೊಂದಿಗೆ ಬೆರೆತು ಅಭಿವೃದ್ಧಿ ಕೆಲಸ ಮಾಡಬಹುದು, ಯೋಜನೆ ರೂಪಿಸಬಹುದು, ಇನ್ನೊಬ್ಬರ ಮಾತಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ವಿಶ್ವಕ್ಕೆ ತೋರಿಸಿದ ವ್ಯಕ್ತಿ ಅವರು ಎಂದರು.

ಈ ಸಂದರ್ಭದಲ್ಲಿ ಆಶ್ರಮದ ನಿರ್ದೇಶಕ ನಿರ್ದೇಶಕಿ ರಜನಿ ಸಿ. ಭಟ್, ರೋಶನಿ ಸಿ. ಭಟ್, ರಾಹುಲ್ ಸಿ. ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News