ಸಿಸಿಬಿ ತನಿಖಾಧಿಕಾರಿ ಮುಂದೆ ಮತ್ತೆ ಹಾಜರಾದ ಇಂದ್ರಜಿತ್

Update: 2020-09-03 11:33 GMT

ಬೆಂಗಳೂರು, ಸೆ.3: ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಜಾಲ ಕಾರ್ಯಾಚರಿಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಸಿನಿಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ಗುರುವಾರ ಎರಡನೇ ಬಾರಿಗೆ ಸಿಸಿಬಿ ತನಿಖಾಧಿಕಾರಿಗಳ ಮುಂದೆ ಹಾಜರಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಗುರವಾರ ಸಿಸಿಬಿ ಕೇಂದ್ರ ಕಚೇರಿಗೆ ಭೇಟಿ ನೀಡಿದ ಅವರು, 30 ನಿಮಿಷಗಳಲ್ಲೇ ವಿಚಾರಣೆ ಮುಗಿಸಿ ಹೊರಬಂದರು. ಬಳಿಕ ಈ ಕುರಿತು ಮಾತನಾಡಿದ ಅವರು, ‘‘ನಾನು ಈ ಪ್ರಕರಣದ ಸಾಕ್ಷವೂ ಅಲ್ಲ. ಮಾಹಿತಿದಾರರನೂ ಅಲ್ಲ. ನಾನು ಪಾರಿವಾಳ ರೀತಿ ಸಂದೇಶ ರವಾನಿಸಿದ್ದೇನೆ’’ ಎಂದು ತಮ್ಮದೇ ದಾಟಿಯಲ್ಲಿ ಹೇಳಿದರು.

ಪ್ರಕರಣದಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎನ್ನುವ ಬಗ್ಗೆ ಮಾಹಿತಿ ನೀಡುವುದಿಲ್ಲ. ಅವರ ಹೆಸರುಗಳನ್ನು ಬಹಿರಂಗ ಪಡಿಸುವುದಿಲ್ಲ. ಇದು ಪೊಲೀಸ್ ತನಿಖೆಗೆ ಅಡ್ಡಿಯಾದೀತು ಎಂದು ಇಂದ್ರಜಿತ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News