ಗೂಂಡಾ ಕಾಯ್ದೆಯಡಿ ಬಂಧನ

Update: 2020-09-03 11:30 GMT

ಬೆಂಗಳೂರು, ಸೆ.3: ಗಂಭೀರ ಅಪರಾಧ ಪ್ರಕರಣ ಸಂಬಂಧ ರೌಡಿ ವಿನಯಕುಮಾರ್ ಎಂಬಾತನನ್ನು ಗೂಂಡಾ ಕಾಯ್ದೆಯಡಿ ಇಲ್ಲಿನ ಮಹಾಲಕ್ಷ್ಮೀ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಶ್ರೀರಾಂನಗರ ನಿವಾಸಿಯಾಗಿರುವ 30 ವರ್ಷದ ವಿನಯಕುಮಾರ್, ಸಕ್ರಿಯವಾಗಿ ರೌಡಿ ಚುಟಿವಟಿಕೆಗಳಲ್ಲಿ ಇದ್ದ. ಈತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಸುಲಿಗೆ ಸೇರಿದಂತೆ ಹಲುವ ಆರೋಪಗಳಡಿ ಮೊಕದ್ದಮೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News