ಜಿಎಸ ಟಿಯ ರಾಜ್ಯಗಳ ಪಾಲು ಶೀಘ್ರ ಪಾವತಿಸುವಂತೆ ಆಗ್ರಹಿಸಿ ಸಂಸದರ ಧರಣಿ

Update: 2020-09-17 17:11 GMT

ಹೊಸದಿಲ್ಲಿ, ಸೆ. 17: ಜಿಎಸ ಟಿಯಲ್ಲಿ ರಾಜ್ಯಗಳ ಪಾಲು ಶೀಘ್ರ ಪಾವತಿಸುವಂತೆ ಆಗ್ರಹಿಸಿ ಪ್ರತಿಪಕ್ಷಗಳ ಸಂಸದರು ಪೋಸ್ಟ್‌ರ್ ಹಾಗೂ ಬ್ಯಾನರ್‌ಗಳನ್ನು ಹಿಡಿದುಕೊಂಡು ಗುರುವಾರ ಸಂಸತ್ ಆವರಣದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

‘‘ಜಿಎಸ ಟಿಯಲ್ಲಿ ರಾಜ್ಯಗಳ ಪಾಲು ಶೀಘ್ರ ಪಾವತಿಸಿ’’ ಎಂದು ಪ್ರತಿಭಟನೆ ನಡೆಸಿದ ಸಂಸದರು ಘೋಷಣೆಗಳನ್ನು ಕೂಗಿದರು. ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್), ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ), ದ್ರಾವಿಡ ಮುನ್ನೇತ್ರ ಕಳಂಗಂ (ಡಿಎಂಕೆ), ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ಆಮ್ ಆದ್ಮಿ ಪಕ್ಷ (ಎಎಪಿ) ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ), ಸಮಾಜವಾದಿ ಪಕ್ಷ ಹಾಗೂ ಶಿವಸೇನೆಯ ಸಂಸದರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News