ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಪೊಲೀಸ್ ವಶಕ್ಕೆ

Update: 2020-09-19 11:44 GMT

ಬೆಂಗಳೂರು, ಸೆ.19: ಪಿಸ್ತೂಲು ಇಟ್ಟುಕೊಂಡು ಪ್ರಯಾಣ ಬೆಳೆಸಿದ್ದ ಆರೋಪದಡಿ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ರನ್ನು ಇಲ್ಲಿನ ಸಿಐಎಸ್‍ಎಫ್ ಪೊಲೀಸರು ವಶಕ್ಕೆ ಪಡೆದರು ಎಂದು ತಿಳಿದುಬಂದಿದೆ.

ನಗರದ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆನಂದ್ ಅಸ್ನೋಟಿಕರ್ ಅವರು ಪಿಸ್ತೂಲು ಇಟ್ಟುಕೊಂಡಿರುವ ಬಗ್ಗೆ ಸ್ಥಳೀಯ ತನಿಖಾಧಿಕಾರಿಗಳಿಗೆ ಮಾಹಿತಿ ನೀಡದ ಹಿನ್ನೆಲೆ ಅವರನ್ನು ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಶನಿವಾರ ಆನಂದ್ ಅಸ್ನೋಟಿಕರ್ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿದ್ದು, ತಪಾಸಣೆ ವೇಳೆ ಬ್ಯಾಗ್‍ನಲ್ಲಿ ಪಿಸ್ತೂಲು ಪತ್ತೆಯಾಗಿದೆ. ಗಾಬರಿಗೊಂಡ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಆನಂದ್ ಅಸ್ನೋಟಿಕರ್ ರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ತದನಂತರ ವಿಚಾರಣೆ ವೇಳೆ ಇದು ಪರವಾನಗಿ ಹೊಂದಿರುವ ಪಿಸ್ತೂಲು ಎಂದು ದೃಢವಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News