ಗುಲ್‍ಮೊಹರ್ ಮರದ ಬುಡಕ್ಕೆ ಡ್ರಿಲ್ ಮಾಡಿ ಆ್ಯಸಿಡ್‍ ಸುರಿದ ಕಿಡಿಗೇಡಿ

Update: 2020-09-19 14:40 GMT

ಬೆಂಗಳೂರು, ಸೆ.19: ನಗರದಲ್ಲಿ ಗಿಡ, ಮರಗಳಿಗೆ ವಿಷ ಉಣಿಸುವ ಕಿಡಿಗೇಡಿಗಳ ಕೃತ್ಯ ಮತ್ತೆ ನಡೆದಿದ್ದು, ನಗರದ ಬನಶಂಕರಿಯ ಕದಿರೇನಹಳ್ಳಿಯ ಡಾ.ವಿಷ್ಣುವರ್ಧನ್ ರಸ್ತೆಯಲ್ಲಿ ಹಸಿರಿನಿಂದ ಮೈ ತುಂಬಿಕೊಂಡಿದ್ದ ಗುಲ್‍ಮೊಹರ್ ಮರದ ಬುಡಕ್ಕೆ ಡ್ರಿಲ್ ಮಾಡಿ, ಆ್ಯಸಿಡ್‍ ಹಾಕಿದ ಘಟನೆ ನಡೆದಿದೆ.

ಆ್ಯಸಿಡ್‍ ಹಾಕಿರುವುದನ್ನು ಗಮನಿಸಿದ ಪಾದಾಚಾರಿ ಒಬ್ಬರು ತಕ್ಷಣ ಬಿಬಿಎಂಪಿ ಹಾಗೂ ಪರಿಸರ ರಕ್ಷಕ ವಿಜಯ್ ನಿಶಾಂತ್ ಅವರಿಗೆ ಕರೆ ಮಾಡಿ, ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ವಿಜಯ್ ನಿಶಾಂತ್, ಮರಕ್ಕೆ ಹಾಕಿದ್ದ ಆ್ಯಸಿಡ್‍ ಸ್ವಚ್ಛಗೊಳಿಸಿ, ಮರಕ್ಕೆ ಆಗಬಹುದಾದ ತೊಂದರೆಯನ್ನು ತಪ್ಪಿಸಿದ್ದಾರೆ.

ಇನ್ನು ಕೊರೆದ ರಂದ್ರವನ್ನು ವೈಟ್ ಸಿಮೆಂಟ್‍ನಿಂದ ಮುಚ್ಚಲಾಗಿದೆ. ಮರ ಕಡಿಯಲು ಸಾಧ್ಯವಾಗದೇ ಇರುವುದರಿಂದ ಈ ರೀತಿಯಾಗಿ ಮರವನ್ನು ನಾಶಗೊಳಿಸಲು, ಒಣಗಿಸುವ ಪ್ರಯತ್ನ ನಡೆಸಲಾಗಿದೆ. ಹೀಗಾಗಿ ರಸ್ತೆಗಳಲ್ಲಿ, ಮನೆ ಮುಂದೆ ಯಾರಾದರೂ ಡ್ರಿಲ್ ಮಾಡುತ್ತಿದ್ದರೆ, ತಕ್ಷಣ ತಡೆದು, ಪಾಲಿಕೆ ಗಮನಕ್ಕೆ ತರಬೇಕೆಂದು ಪರಿಸರ ಹೋರಾಟಗಾರ ವಿಜಯ್ ನಿಶಾಂತ್ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News