ಬೆಂಗಳೂರಿನಲ್ಲಿ ಪ್ರತಿಭಟನಾಕಾರರನ್ನು ಎಳೆದಾಡಿದ ಪೊಲೀಸರು: ವಿಡಿಯೋ ವೈರಲ್

Update: 2020-09-28 05:13 GMT

ಬೆಂಗಳೂರು, ಸೆ.28: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಶಾಂತಿಯುತವಾಗಿ ಜಾಥಾ ನಡೆಸಲು ಮುಂದಾಗಿದ್ದ ಪ್ರತಿಭಟನಾಕಾರರನ್ನು ಕೆಲವು ಪೊಲೀಸ್ ಸಿಬ್ಬಂದಿ ಎಳೆದಾಡಿ, ಬಲವಂತವಾಗಿ ವಶಕ್ಕೆ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇದರ ವಿಡಿಯೋ ವೈರಲ್ ಆಗಿದೆ.

ಬಂದ್ ಹಿನ್ನಲೆ ಸೋಮವಾರ ಇಲ್ಲಿನ ಪುರಭವನದ  ಜಮಾಯಿಸಲು ಪ್ರತಿಭಟನಾಕಾರರು ನಾಯಂಡಳ್ಳಿ ಸರ್ಕಲ್ ಬಳಿಯ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಈ ಸಂದರ್ಭದಲ್ಲಿ ಅಲ್ಲಿನ ಪೊಲೀಸ್ ಸಿಬ್ಬಂದಿ, ಇಲ್ಲಿ ನಿಲ್ಲುವಂತಿಲ್ಲ ಎಂದು ಬಲವಂತವಾಗಿ

ಕರ್ನಾಟಕ ಜನಶಕ್ತಿ ಕುಮಾರ್ ಸಮತಳ, ಮರಿಯಪ್ಪ, ಸರೋವರ್ ಬೆಂಕಿಕೆರೆ, ಶ್ರೀನಿವಾಸ, ವರದರಾಜ್ ಇನ್ನಿತರರನ್ನು ಬಂಧಿಸಿದ್ದಾರೆ.

ಈ ವೇಳೆ ಪ್ರತಿಭಟನಾಕಾರರಲ್ಲಿ ಒಬ್ಬರಾದ ರವಿ ಎಂಬುವರನ್ನು ಪೊಲೀಸರು ಆಟೋ ರಿಕ್ಷಾದಲ್ಲಿ ಕುಳಿತು ಕೊಳ್ಳುವಂತೆ ಎಳೆದಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News