ಬೆಂಗಳೂರು: ಹತ್ರಸ್ ಅತ್ಯಾಚಾರ ಪ್ರಕರಣ ಖಂಡಿಸಿ ಎಐಎಂಎಸ್‍ಎಸ್‍ ನಿಂದ ವಿವಿಧೆಡೆ ಪ್ರತಿಭಟನೆ

Update: 2020-10-13 10:47 GMT

ಬೆಂಗಳೂರು, ಅ.13: ಉತ್ತರ ಪ್ರದೇಶದ ಹತ್ರಸ್ನಲ್ಲಿ ನಡೆದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಹಾಗೂ ಸಾವು ಪ್ರಕರಣವನ್ನು ಖಂಡಿಸಿ ಎಐಎಂಎಸ್‍ಎಸ್(ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ) ವತಿಯಿಂದ ನಗರದ ವಿವಿಧ ಬಡಾವಣೆಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. 

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯು, ಉತ್ತರ ಪ್ರದೇಶ ಸರಕಾರ ಅತ್ಯಾಚಾರದ ಆರೋಪಿಗಳನ್ನು ರಕ್ಷಿಸುತ್ತಿದೆ. ಹಾಗೂ ಪ್ರಕರಣದಲ್ಲಿ ಸಾಕ್ಷಿ ನಾಶಮಾಡಲು ಮಧ್ಯರಾತ್ರಿ ಆಕೆಯ ಶವವನ್ನು ಕುಟುಂಬದವರಿಗೆ ನೀಡದೆ ಪೋಲಿಸರೇ ಸುಟ್ಟಿರುವ ರೀತಿ ಅತ್ಯಾಚಾರಗೊಳಗಾದ ಯುವತಿಯ ಮೇಲೆ ಮತ್ತೊಮ್ಮೆ ಅತ್ಯಾಚಾರವೆಸಗಿದಂತೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಕೇಂದ್ರ ಬಿಜೆಪಿ ಸರಕಾರ ಹಾಗೂ ಉತ್ತರ ಪ್ರದೇಶದ ಬಿಜೆಪಿ ಸರಕಾರ ಅತ್ಯಾಚಾರಿಗಳಿಂದ ಯುವತಿಯರನ್ನು ರಕ್ಷಿಸಲು ಸಂಪೂರ್ಣ ವಿಫಲವಾಗಿದೆಯೆಂದು ಆರೋಪಿಸಿರುವ ಎಐಎಂಎಸ್‍ಎಸ್ ಜಿಲ್ಲಾ ಕಾರ್ಯದರ್ಶಿ ಶಾಂತಾ, ದುಷ್ಕರ್ಮಿಗಳಿಗೆ ಈ ಕೂಡಲೇ ಶಿಕ್ಷೆಯಾಗಬೇಕು ಮತ್ತು ಮದ್ಯಪಾನ ಹಾಗೂ ಅಶ್ಲೀಲತೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News