ಶಿಲ್ಪಕಲಾ ಅಕಾಡೆಮಿ ಸದಸ್ಯರಾಗಿ ನವೀನ್ ಕಡ್ಲಾಸ್ಕರ, ವಿಪಿನ್‍ ಸಿಂಗ್, ಜ್ಯೋತಿ ಭಾರತಿ ಆಯ್ಕೆ

Update: 2020-10-21 11:56 GMT

ಬೆಂಗಳೂರು, ಅ.21: ಕರ್ನಾಟಕ ಶಿಲ್ಪಕಲಾ ಅಕಾಡೆಮಿಗೆ ಮೂರು ಮಂದಿ ಶಿಲ್ಪ ಕಲಾವಿದರನ್ನು ಸಹ ಸದಸ್ಯರನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಆರ್.ಚಂದ್ರಶೇಖರ ತಿಳಿಸಿದ್ದಾರೆ.

ಅಕಾಡೆಮಿಯ ಅಧ್ಯಕ್ಷ ವೀರಣ್ಣಾ ಅರ್ಕಸಾಲಿ ಅಧ್ಯಕ್ಷತೆಯಲ್ಲಿ ಸೆ.9ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಶಿಲ್ಪ ಕಲಾವಿದರಾದ ಧಾರವಾಡ ಜಿಲ್ಲೆಯ ನವೀನ್ ಎಸ್.ಕಡ್ಲಾಸ್ಕರ, ಶಿವಮೊಗ್ಗದ ವಿಪಿನ್‍ ಸಿಂಗ್ ಭದೌರಿಯಾ ಹಾಗೂ ಬೆಂಗಳೂರಿನ ಜ್ಯೋತಿ ಭಾರತಿಯವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News