ದರೋಡೆ ಪ್ರಕರಣ : 8.70 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಾಲ್ವರ ಬಂಧನ

Update: 2020-10-21 13:16 GMT

ಬೆಂಗಳೂರು, ಅ. 21: ಮನೆಯ ಬೀಗ ಒಡೆದು ಚಿನ್ನಾಭರಣ ದೋಚುತ್ತಿದ್ದ ಹಾಗೂ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿ ಗಳನ್ನು ಬಂಧಿಸಿ 3.50 ಲಕ್ಷ ರೂ.ಬೆಲೆ ಬಾಳುವ ಏಳು ದ್ವಿಚಕ್ರ ವಾಹನ ಹಾಗೂ 5.20 ಲಕ್ಷ ರೂ.ಬೆಲೆ ಬಾಳುವ ಚಿನ್ನಾಭರಣಗಳನ್ನು ಆಗ್ನೇಯ ವಿಭಾಗದ ಆಡುಗೋಡಿ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಕೋರಮಂಗಲದ ಅಲೆಕ್ಸ್ ಮ್ಯಾಥ್ಯೂ(22), ಕೆಜಿಎಫ್‌ನ ಸತೀಶ್‌ಕುಮಾರ್(20), ಎಲ್‌ಆರ್ ನಗರದ ಆಂಥೋನಿ ಮತ್ತು ಕುಂಬಳಗೋಡಿನ ಚಂದ್ರು(22) ಎಂದು ಗುರುತಿಸಲಾಗಿದೆ.

93 ಗ್ರಾಂ ಚಿನ್ನಾಭರಣ, 80 ಗ್ರಾಂ ಬೆಳ್ಳಿ ಆಭರಣ, 4 ಲ್ಯಾಪ್‌ಟಾಪ್, 20 ವಿವಿಧ ಕಂಪೆನಿಯ ಮೊಬೈಲ್‌ಗಳು ಶಪಡಿಸಿಕೊಂಡಿದ್ದಾರೆ. ಆಡುಗೋಡಿ ಭಾಗದಲ್ಲಿ ಪದೇ ಪದೇ ಮನೆಗಳವು ಹಾಗೂ ವಾಹನಗಳ್ಳತನ ದಾಖಲಾಗುತ್ತಿದ್ದವು. ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ, ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ರಾಮಮೂರ್ತಿನಗರ, ಜೆಜೆನಗರ, ಬಾಣಸವಾಡಿ, ಕುಂಬಳಗೋಡು, ಬಿಡದಿ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವ ಪ್ರಕರಣಗಳು ಪತ್ತೆಯಾಗಿವೆ. ಈ ಉತ್ತಮ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಕಮಲ್ಪಂಥ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News