ಬಾಡಿಗೆಗೆ ಮನೆ ಪಡೆದು ಭೋಗ್ಯಕ್ಕೆ ನೀಡುತ್ತಿದ್ದ ವಂಚಕನ ಬಂಧನ

Update: 2020-10-21 16:00 GMT

ಬೆಂಗಳೂರು, ಅ.21: ಮನೆಗಳನ್ನು ಬಾಡಿಗೆಗೆ ಪಡೆದು ಬೇರೆಯವರಿಗೆ ಭೋಗ್ಯ(ಲೀಸ್)ಕ್ಕೆ ಹಾಕಿ ಮೋಸಗೊಳಿಸುತ್ತಿದ್ದ ವಂಚಕನನ್ನು ಕೆ.ಜಿ.ಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಬಂಧಿತನನ್ನು ಕೇರಳ ಮೂಲದ ಸದಾನಂದ ಎಂದು ಗುರುತಿಸಲಾಗಿದೆ. ಈತ ಬಾಡಿಗೆಗೆ ಮನೆ ಪಡೆದುಕೊಂಡು, ಬಳಿಕ ಮನೆಯನ್ನು ಬೇರೆಯ ವರಿಗೆ ತೋರಿಸಿ ಲೀಸ್‍ಗೆ ನೀಡಿ ಹೆಚ್ಚಿನ ಹಣ ಪಡೆದುಕೊಂಡು ಪರಾರಿಯಾಗುತ್ತಿದ್ದನು.

ಈ ಬಗ್ಗೆ ಕೆಜಿ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ವಂಚಕನೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ಗೊಳಪಡಿಸಿದ್ದಾರೆ. ಈ ಆರೋಪಿಯು ಈವರೆಗೂ 50ಕ್ಕೂ ಹೆಚ್ಚು ಮಂದಿಗೆ ವಂಚಿಸಿ ಹಣ ಪಡೆದಿರುವುದಲ್ಲದೆ ಮನೆ ಮಾಲಕರಿಗೂ ಮೋಸ ಮಾಡಿರುವುದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News