ಸಾಲು ಸಾಲು ರಜೆ: ಪ್ರಯಾಣಿಕರ ಸಂಖ್ಯೆ ಅಧಿಕ, ಸಂಚಾರ ದಟ್ಟಣೆ

Update: 2020-10-24 12:43 GMT

ಬೆಂಗಳೂರು, ಅ.24: ದಸರಾ ಹಬ್ಬದ ಸಾಲು ಸಾಲು ರಜೆ ಹಿನ್ನೆಲೆ ಬೆಂಗಳೂರಿನಿಂದ ಸ್ವಗ್ರಾಮಗಳಿಗೆ ತೆರಳುತ್ತಿರುವ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದ್ದು, ನಗರದ ಬಹುತೇಕ ಕಡೆಗಳಲ್ಲಿ ಶನಿವಾರ ಸಂಚಾರ ದಟ್ಟಣೆ ಕಂಡುಬಂತು.

ಇಲ್ಲಿನ 8ನೇ ಮೈಲಿ ನವಯುಗ ಟೋಲ್ ಬಳಿ ಸಾಲು ಸಾಲಾಗಿ ವಾಹನಗಳು ಗಂಟೆಗಟ್ಟಲೇ ನಿಂತಿದ್ದವು. ರಾಷ್ಟ್ರೀಯ ಹೆದ್ದಾರಿ 4 ರಾಜ್ಯದ 23ಕ್ಕೂ ಹೆಚ್ಚು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸಲಿದ್ದು, ಈ ಟೋಲ್ ಮುಖಾಂತರವೇ ಎಲ್ಲ ವಾಹನಗಳು ಸಂಚರಿಸಬೇಕಿದೆ. ಹೀಗಾಗಿಯೇ ಸಂಚಾರ ದಟ್ಟಣೆ ಇದೆ ಎಂದು ಸಂಚಾರ ಪೊಲೀಸರು ಸಮಾಜಾಯಿಷಿ ನೀಡಿದರು.

ಸಂಚಾರ ದಟ್ಟಣೆಯಲ್ಲಿ ಆಂಬ್ಯುಲೆನ್ಸ್ ಸಹ ಸಿಲುಕಿ ಪರದಾಡುವ ಸ್ಥಿತಿ ಎದುರಾಗಿತ್ತು. ಇನ್ನು ಸ್ಥಳದಲ್ಲಿ ಸಂಚಾರ ದಟ್ಟಣೆಯಾದರೂ ಸಹ ಸಮೀಪದ ಪೀಣ್ಯ ಠಾಣಾ ಪೊಲೀಸರು ತುರ್ತಾಗಿ ಬಂದು, ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸುವುದಿಲ್ಲ ಎಂದು ಸವಾರರು ದೂರಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News