ಕೇರಳ: ಸಿಪಿಎಂನ ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೆ ಕೋಡಿಯೇರಿ ಬಾಲಕೃಷ್ಣನ್ ರಾಜೀನಾಮೆ

Update: 2020-11-13 16:04 GMT

ತಿರುವನಂತಪುರ, ನ. 13: ಕೇರಳದ ಆಡಳಿತಾರೂಢ ಸಿಪಿಎಂನ ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೆ ಕೋಡಿಯೇರಿ ಬಾಲಕೃಷ್ಣನ್ ಅನಾರೋಗ್ಯದ ಕಾರಣ ನೀಡಿ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸಿಪಿಎಂನ ರಾಜ್ಯ ಕಾರ್ಯದರ್ಶಿಯ ಉಸ್ತುವಾರಿಯನ್ನು ಎಲ್‌ಡಿಎಫ್ ಸಂಚಾಲಕ ಎ. ವಿಜಯ ರಾಘವನ್ ಅವರಿಗೆ ತಾತ್ಕಾಲಿಕವಾಗಿ ವಹಿಸಿ ಕೊಡಲಾಗಿದೆ. ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಪುತ್ರ ಬಿನೇಶ್ ಕೋಡಿಯೇರಿ ಜೈಲಿಗೆ ಹೋದ ದಿನಗಳ ಬಳಿಕ ಕೋಡಿಯೇರಿ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕೋಡಿಯೇರಿ ಬಾಲಕೃಷ್ಣನ್ ಅವರು ಸಲ್ಲಿಸಿದ ರಾಜೀನಾಮೆ ಪತ್ರ ಸ್ವೀಕರಿಸಲಾಗಿದೆ ಎಂದು ಸಿಪಿಎಂನ ಕಾರ್ಯಕಾರಿಣಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News