ಶಾಖಾಧಿಕಾರಿಗಳ ಹುದ್ದೆಗೆ ಮುಂಭಡ್ತಿ: ಇಬ್ಬರು ಶಾಖಾಧಿಕಾರಿಗಳ ವರ್ಗಾವಣೆ

Update: 2020-11-17 14:25 GMT

ಬೆಂಗಳೂರು, ನ. 17: ಸಚಿವಾಲಯದ ಮೂಲ ವೃಂದಕ್ಕೆ ಸೇರಿದ 5 ಮಂದಿ ಹಿರಿಯ ಸಹಾಯಕರುಗಳಿಗೆ ವೇತನ ಶ್ರೇಣಿಯನ್ನು 46,400 ರೂ.ಗಳಿಗೆ ಹಾಗೂ 62,600 ರೂ.ಗಳಿಗೆ ಹೆಚ್ಚಿಸಿ ಅವರ ಹೆಸರಿನ ಮುಂದಿನ ಸೂಚಿತ ಸ್ಥಳಕ್ಕೆ ತಕ್ಷಣದಿಂದಲೇ ನಿಯೋಜನೆಗೊಳ್ಳುವಂತೆ ಮಂಗಳವಾರ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಜಯಂತಿ-ಶಾಖಾಧಿಕಾರಿ, ಆರ್ಥಿಕ ಇಲಾಖೆ, ಜಲದೇವಿ ಎಸ್.-ಶಾಖಾಧಿಕಾರಿ ಶಿಕ್ಷಣ ಇಲಾಖೆ, ಶಿಲ್ಪಾಶ್ರೀ ಟಿ.ಎಸ್.-ಶಾಖಾಧಿಕಾರಿ ಒಳಾಡಳಿತ ಇಲಾಖೆ, ನಳಿನಾಕ್ಷಿ ಜಿ.ಎನ್.-ಶಾಖಾಧಿಕಾರಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ರಜಾ ಮೀಸಲಾತಿ) ಹಾಗೂ ಪ್ರಭಾಕರ್ ಕೆ.-ಶಾಖಾಧಿಕಾರಿ ಸಾರ್ವಜನಿಕ ಉದ್ದಿಮೆಗಳ ಇಲಾಖೆ ಇಲ್ಲಿಗೆ ನಿಯುಕ್ತಿಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧೀನ ಕಾರ್ಯದರ್ಶಿ ಬಿ.ಡಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.

ವರ್ಗಾವಣೆ: ಇಬ್ಬರು ಶಾಖಾಧಿಕಾರಿಗಳನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ಅವರ ಹೆಸರಿನ ಮುಂದಿನ ಸೂಚಿತ ಸ್ಥಳಕ್ಕೆ ವರ್ಗಾವಣೆ ಮಾಡಲಾಗಿದೆ. ರಂಗಪ್ಪ ತಿಮ್ಮಣ್ಣ ಕರಿಗಾರ-ಸಾರಿಗೆ ಇಲಾಖೆ ಶಾಖಾಧಿಕಾರಿ, ಪ್ರಭಾವತಿ ಟಿ.ಆರ್.-ನಿಯೋಜನೆ ಮೇಲೆ ರಾಜ್ಯಪಾಲರ ಸಚಿವಾಲಯ ಇಲ್ಲಿನ ಶಾಖಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News