ಕಾಂಗ್ರೆಸ್ ಕೈಬಿಟ್ಟ ಊರ್ಮಿಳಾ ನಾಳೆ ಶಿವಸೇನೆಗೆ ಸೇರ್ಪಡೆ

Update: 2020-11-30 04:10 GMT

ಮುಂಬೈ: ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್, ಮಂಗಳವಾರ ಶಿವಸೇನೆ ಸೇರಲಿದ್ದಾರೆ. 

ಇತ್ತೀಚೆಗೆ ಊರ್ಮಿಳಾ ಮಾತೋಂಡ್ಕರ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು.

ಮುಖ್ಯಮಂತ್ರಿ ಸಮ್ಮುಖದಲ್ಲಿ ಊರ್ಮಿಳಾ ಮಂಗಳವಾರ ಶಿವಸೇನೆ ಸೇರಲಿದ್ದಾರೆ ಎಂದು ಉದ್ಧವ್ ಠಾಕ್ರೆಯವರ ನಿಕಟವರ್ತಿ ಹರ್ಷಲ್ ಪ್ರಧಾನ್ ಹೇಳಿದ್ದಾರೆ. ಊರ್ಮಿಳಾ ಅವರ ಹೆಸರನ್ನು ವಿಧಾನ ಪರಿಷತ್ತಿಗೆ ರಾಜ್ಯಪಾಲರ ಕೋಟಾದಡಿ ನಾಮಕರಣ ಮಾಡಲು ರಾಜ್ಯಪಾಲ ಬಿ.ಎಸ್.ಕೊಶಿಯಾರಿ ಅವರಿಗೆ ಶಿಫಾರಸ್ಸು ಮಾಡಲಾಗಿದೆ. ಇದೇ ಕೋಟಾದಡಿ ನೇಮಕ ಮಾಡಲು ಮಹಾ ವಿಕಾಸ್ ಅಗಾಡಿಯ ಮೂರು ಪಕ್ಷಗಳ ಇತರ 11 ಮಂದಿಯ ಹೆಸರನ್ನೂ ಶಿಫಾರಸ್ಸು ಮಾಡಲಾಗಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಮುಂಬೈ ಉತ್ತರ ಕಾಂಗ್ರೆಸ್ ಟಿಕೆಟ್‌ನಲ್ಲಿ ಕ್ಷೇತ್ರದಿಂದ ಸ್ಪರ್ಧಿಸಿ ಊರ್ಮಿಳಾ ಪರಾಭವಗೊಂಡಿದ್ದರು. ಬಳಿಕ ಕಾಂಗ್ರೆಸ್ ಪಕ್ಷದ ಮುಂಬೈ ಘಟಕದ ಪದಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಮುಂಬೈ ನಗರವನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ ಕಂಗಾನಾ ರಾಣಾವತ್ ಅವರನ್ನು ಇತ್ತೀಚೆಗೆ ಊರ್ಮಿಳಾ ಟೀಕಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News