ಅಸಮಾಧಾನ ಶಮನಕ್ಕೆ ಯತ್ನ: ನಾಲ್ವರ ಖಾತೆ ಮರು ಹಂಚಿಕೆ?

Update: 2021-01-22 07:05 GMT

ಬೆಂಗಳೂರು, ಜ.22: ಖಾತೆ ಹಂಚಿಕೆ ಬಂಡಾಯಕ್ಕೆ ತೇಪೆ ಹಾಕಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎಂಟಿಬಿ ನಾಗರಾಜ್ ಹಾಗೂ ಗೋಪಾಲಯ್ಯ ಸಹಿತ ನಾಲ್ವರ ಸಚಿವರ ಖಾತೆ ಬದಲಾವಣೆ ಮಾಡಿದ್ದಾರೆಂದು ಗೊತ್ತಾಗಿದೆ.

 ಇಂದು ಹಂಚಿಕೆಯಾದ ರಾಜ್ಯ ಸಚಿವ ಸಂಪುಟದ ಖಾತೆಗಳು ಕೆ.ಗೋಪಾಲಯ್ಯ - ಅಬಕಾರಿ, ಎಂಟಿಬಿ ನಾಗರಾಜ್- ಪೌರಾಡಳಿತ, ಸಕ್ಕರೆ, ಆರ್.ಶಂಕರ್ - ತೋಟಗಾರಿಕೆ, ರೇಷ್ಮೆ, ಡಾ.ಕೆ.ಸಿ.ನಾರಾಯಣಗೌಡ - ಯುವಜನ ಕ್ರೀಡೆ, ವಕ್ಫ್, ಹಜ್ ಜೊತೆಗೆ ಹೆಚ್ಚುವರಿಯಾಗಿ ಯೋಜನೆ ಸಾಂಖ್ಯಿಕ ಅಂಕಿಅಂಶಗಳ ಖಾತೆ ನೀಡಿ ಮರು ಹಂಚಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸಂಪುಟದಲ್ಲಿ ಖಾತೆ ಬದಲಾವಣೆಯಲ್ಲಿ ಎದ್ದಿದ್ದ ಭಿನ್ನಮತ ಶಮನಗೊಳಿಸಲು ಖಾತೆ ಮರು ಹಂಚಿಕೆ ಮಾಡಲಾಗಿದೆ. ಉಳಿದಂತೆ ಹಿರಿಯ ಸಚಿವರನ್ನು ಮುಖ್ಯಮಂತ್ರಿ ಸಮಾಧಾನಪಡಿಸಿದ್ದಾರೆ ಎಂದು ಹೇಳಲಾಗಿದೆ. ಖಾತೆ ಮರು ಹಂಚಿಕೆ ಅಧಿಕೃತ ಆದೇಶ ಇನ್ನಷ್ಟೇ ಹೊರಬೀಳಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News