ಇಂದು ಪ್ರತಿಭಟನಾನಿರತ ರೈತರನ್ನು ಉದ್ದೇಶಿಸಿ ಪಂಜಾಬ್ ರೈತ ಮುಖಂಡರಿಂದ ಭಾಷಣ

Update: 2021-01-27 04:46 GMT

ಹೊಸದಿಲ್ಲಿ: ದಿಲ್ಲಿ-ಹರ್ಯಾಣ ಗಡಿಗಳಲ್ಲಿ ಇಂದು ಬೆಳಗ್ಗೆ ಪಂಜಾಬ್ ನ ರೈತ ಮುಖಂಡರು ಪ್ರತಿಭಟನಾನಿರತ ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ವರದಿಯಾಗಿದೆ.

ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್ ರ್ಯಾಲಿ ನಡೆಸುವ ಉದ್ದೇಶ ಹೊಂದಿದ್ದ ರೈತರ ಕೆಲವು ಗುಂಪು ತಡೆಬೇಲಿ ಹಾಕಿರುವ ವಿಚಾರಕ್ಕೆ ಪೊಲೀಸರೊಂದಿಗೆ ಘರ್ಷಣೆಗೆ ಇಳಿದ ಕಾರಣ ದಿಲ್ಲಿಯಲ್ಲಿ ಮಂಗಳವಾರ ಹಿಂಸಾಚಾರ ಸಂಭವಿಸಿತ್ತು. ರ್ಯಾಲಿ ನಡೆಸಬೇಕಾಗಿದ್ದ ರೈತರು ಕೆಂಪುಕೋಟೆಯತ್ತ ಧಾವಿಸಿ ಪ್ರತಿಭಟಿಸಿದ್ದರು. ಈ ವೇಳೆ ಓರ್ವ ರೈತ ಪ್ರಾಣ ಕಳೆದುಕೊಂಡಿದ್ದು, ಸುಮಾರು 86 ಪೊಲೀಸರು ಗಾಯಗೊಂಡಿದ್ದರು. 

ಹಿಂಸಾಚಾರ ಘಟನೆಗೆ ಸಂಬಂಧಿಸಿ 22 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News