ಕ್ವೆಸ್ಟ್ ಫೌಂಡೇಶನ್‍ಗೆ ನೂತನ ಸಮಿತಿ ಆಯ್ಕೆ

Update: 2021-03-03 17:56 GMT

ಬೆಂಗಳೂರು, ಮಾ.3: ಬೆಂಗಳೂರು ಕೇಂದ್ರೀಕರಿಸಿ ಸಾಮಾಜಿಕ ಹಾಗೂ ಶೈಕ್ಷಣಿಕ ರಂಗದಲ್ಲಿ ಕಾರ್ಯಾಚರಿಸುತ್ತಿರುವ ಕ್ವೆಸ್ಟ್ ಫೌಂಡೇಶನ್‍ಗೆ ನೂತನ ಸಮಿತಿ ಆಯ್ಕೆ ಮಾಡಲಾಗಿದೆ. ಕ್ವೆಸ್ಟ್ ಫೌಂಡೇಶನ್ ನಗರದ ಪ್ರಮುಖ ವಿದ್ಯಾಕೇಂದ್ರವಾದ ಮರ್ಖಿನ್ಸ್ ನ ಪೂರ್ವ ವಿದ್ಯಾರ್ಥಿ ಒಕ್ಕೂಟವಾಗಿದೆ.

ಮರ್ಖಿನ್ಸ್ ಪ್ರಾಂಶುಪಾಲ ಜಾಫರ್ ನೂರಾನಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಅಹ್ಮದ್ ಅಸ್ರಾರ್ ಅಲ್ ಖಾದಿರಿ ಹಾಗೂ ಸಂಚಾಲಕ ಸ್ಥಾನಕ್ಕೆ ರಾಶಿದ್ ಅಲ್ ಖಾದಿರಿ, ಹಣಕಾಸು ವ್ಯವಹಾರ-ಹುಸೈನ್ ಅಲ್ ಖಾದಿರಿ, ಕಾರ್ಯಕ್ರಮ ನಿರ್ವಹಣೆ(ಈವೆಂಟ್ ಮ್ಯಾನೇಜ್‍ಮೆಂಟ್)-ಆಬಿದ್ ಅಲ್ ಖಾದಿರಿ.

ಮಾಧ್ಯಮ-ಮುನವ್ವರ್ ಅಲ್ ಖಾದಿರಿ, ಕ್ವೆಸ್ಟ್ ಕೇರ್-ಶಂಸೀರ್ ಅಲ್ ಖಾದಿರಿ, ಪ್ರಕಾಶಕ-ಯಾಸೀನ್ ಅಲ್ ಖಾದಿರಿ, ಗುಂಟಕಲ್ ಶಾಖೆಯ ಮುಖ್ಯಸ್ಥರಾಗಿ ರಾಝಿಕ್ ಅಲ್ ಖಾದಿರಿ, ಕೋಲಾರ ಶಾಖೆಯ ಮುಖ್ಯಸ್ಥರಾಗಿ ಅಬ್ದುಲ್ಲಾ ಅಲ್ ಖಾದಿರಿ, ಗದಗ ಶಾಖೆಯ ಮುಖ್ಯಸ್ಥರಾಗಿ ಅಸ್ರಾರ್ ಅಲ್ ಖಾದಿರಿ ಅವರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News