ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ: ನಾಲ್ವರಿಗೆ ಗಾಯ
Update: 2021-04-10 13:17 GMT
ಬೆಂಗಳೂರು, ಎ.10: ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ ಹತ್ತಿಕೊಂಡು ನಾಲ್ವರು ಗಾಯಗೊಂಡಿರುವ ಘಟನೆ ಇಲ್ಲಿನ ಕಾಮಾಕ್ಷಿಪಾಳ್ಯದ ತೋಟದ ರಸ್ತೆಯಲ್ಲಿ ನಡೆದಿದೆ.
ತೋಟದ ರಸ್ತೆಯಲ್ಲಿ ಶೆಡ್ವೊಂದರಲ್ಲಿ ಹೊಟೇಲ್ ನಡೆಸುತ್ತಿದ್ದ ರಾಜಣ್ಣ (56), ಗಾಯಿತ್ರಿ (51), ಭಾಸ್ಕರ್ ಹಾಗೂ ಗಂಗರಾಜು ಎಂಬವರು ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಶನಿವಾರ ಬೆಳಗ್ಗೆ ಸೌದೆ ಒಲೆಯ ಪಕ್ಕದಲ್ಲೇ ಅನಿಲ ಸಿಲಿಂಡರ್ ಇಟ್ಟಿದ್ದ ರಾಜಣ್ಣ ಅವರು ವಾಸನೆ ಬರುತ್ತಿರುವುದನ್ನು ನೋಡಿ ರೆಗ್ಯುಲೇಟರ್ ಸರಿ ಮಾಡಲು ಹೋದಾಗ ಬೆಂಕಿ ಹತ್ತಿಕೊಂಡು ಈ ದುರ್ಘಟನೆ ಸಂಭವಿಸಿದೆ. ಗಾಯಗೊಂಡಿರುವ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.