ಪತಿಯ ಸಾವಿನಿಂದ ನೊಂದು ಪತ್ನಿ, ಪುತ್ರ ಆತ್ಮಹತ್ಯೆ

Update: 2021-04-17 12:47 GMT

ಬೆಂಗಳೂರು, ಎ.17: ಪತಿಯ ಅಕಾಲಿಕ ಸಾವಿನಿಂದ ಮನನೊಂದಿದ್ದ ಪತ್ನಿ ತನ್ನ ಪುತ್ರನೊಂದಿಗೆ ರೈಲಿನ ಹಳಿಯಲ್ಲಿ ಮಲಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಯಶವಂತಪುರ ರೈಲ್ವೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನೆಲಮಂಗಲ ತಾಲೂಕಿನ ಭೈರನಾಯಕನಹಳ್ಳಿ ಬಳಿ ಈ ಘಟನೆ ನಡೆದಿದ್ದು, ಚಿಕ್ಕಬಾಣಾವರದ ಸೋಮಶೆಟ್ಟಿಹಳ್ಳಿಯ ರೇಖಾ(38) ಹಾಗೂ ಅವರ ಪುತ್ರ ಮನೋಜ್(21) ಎಂಬವರು ಮೃತರು ಎಂದು ತಿಳಿದುಬಂದಿದೆ.

ಇತ್ತೀಚೆಗೆ ರೇಖಾ ಅವರ ಪತಿ ಮರಣ ಹೊಂದಿದ ಹಿನ್ನೆಲೆ ಮನ ನೊಂದು ಇಲ್ಲಿನ ಉತ್ತರತಾಲೂಕಿನ ಭೈರನಾಯಕನಹಳ್ಳಿ ಬಳಿಯ ರೈಲ್ವೇ ಹಳಿ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಯಶವಂತಪುರ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News