ಏಳು ಪೊಲೀಸರ ವಿರುದ್ಧದ ಪ್ರಕರಣ ರದ್ದತಿಗೆ ನಿರಾಕರಿಸಿದ ಹೈಕೋರ್ಟ್

Update: 2021-06-06 14:35 GMT

ಬೆಂಗಳೂರು, ಜೂ.6: ಸರಗಳ್ಳತನ ಪ್ರಕರಣದಡಿ ಅಮಾಯಕ ಯುವಕನನ್ನು ಅಕ್ರಮ ಬಂಧನದಲ್ಲಿ ಇರಿಸಿ ಕಿರುಕುಳ ನೀಡಿದ್ದ ಏಳು ಮಂದಿ ಪೊಲೀಸರ ಮೇಲೆ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ಸಿಐಡಿ ಡಿವೈಎಸ್ಪಿ ಎಸ್.ಶಿವಕುಮಾರ್, ಮೈಕೋ ಲೇಔಟ್ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ಮುನಿರೆಡ್ಡಿ ಮತ್ತು ಮುಖ್ಯ ಪೇದೆಗಳಾದ ಬಾಲಾಜಿ ಸಿಂಗ್, ಆನಂದ್, ಟಿ.ವೆಂಕಟೇಶ್, ನಿವೃತ್ತ ಮುಖ್ಯ ಪೇದೆ ಮುನಿಯಪ್ಪ ಮತ್ತು ಪೊಲೀಸ್ ಜೀಪ್ ಚಾಲಕ ಜಿ.ಮೋಹನ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ಆಲಿಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ. 

ಸರಗಳ್ಳತನ ಪ್ರಕರಣದ ದೂರುದಾರರು ಮನು ಅವರನ್ನು ಆರೋಪಿಯಾಗಿ ಗುರುತಿಸದೆ ಹೋದರೂ ಬಂಧನದಲ್ಲಿ ಇರಿಸಲಾಗಿದೆ ಎಂದು ಪೀಠವು ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News