ದಿಲ್ಲಿ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ, ವ್ಯಕ್ತಿಯ ಬಂಧನ

Update: 2021-06-14 08:06 GMT

ಹೊಸದಿಲ್ಲಿ: ರಾಷ್ಟ್ರರಾಜಧಾನಿಯ ಇಂದಿರಾ ಗಾಂಧಿ  ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಗ್ಗೆ ಪೊಲೀಸರು ಹುಸಿ ಬಾಂಬ್ ಬೆದರಿಕೆ ಕರೆಯನ್ನು ಸ್ವೀಕರಿಸಿದ್ದಾರೆ.

ಪೊಲೀಸರು ಬೆಳಗ್ಗೆ 7:45ರ ಸುಮಾರಿಗೆ ಕರೆಯನ್ನು ಸ್ವೀಕರಿಸಿದ್ದು, ಪೊಲೀಸರು ಕರೆ ಮಾಡಿದಾತನನ್ನು ಸೆರೆ ಹಿಡಿದಿದ್ದಾರೆ. ಬಂಧಿತನನ್ನು ಆಕಾಶ್ ದೀಪ್ ಎಂದು ಗುರುತಿಸಲಾಗಿದೆ.

ಆರೋಪಿ ತನ್ನ ತಂದೆಯೊಂದಿಗೆ ಇದ್ದು, ದಿಲ್ಲಿಯಿಂದ ಪಾಟ್ನಾಕ್ಕೆ ಹೋಗುತ್ತಿದ್ದ. ಆತ ವಿಮಾನದೊಳಗೆ ಕುಳಿತುಕೊಂಡಿದ್ದಾಗಲೇ ಹುಸಿ ಬೆದರಿಕೆ ಕರೆ ಮಾಡಿದ್ದ.

ಬಂಧಿತ ಆಕಾಶ್ ದೀಪ್ ಮಾನಸಿಕ ಸ್ಥಿತಿ ದುರ್ಬಲವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News