ಬಿಜೆಪಿ ಬ್ಯಾನರ್ ಮುಂದೆ ನಿಂತು ಸರಕಾರದ ರೇಷನ್ ಕಿಟ್ ಹಂಚಿಕೆ: ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಕಿಡಿ

Update: 2021-07-11 17:25 GMT

ಬೆಂಗಳೂರು, ಜು.11: ಬಿಜೆಪಿ ಬ್ಯಾನರ್ ಮುಂದೆ ನಿಂತು ಸರಕಾರದಿಂದ ಕೊಡಮಾಡುವ ರೇಷನ್ ಕಿಟ್ ಹಂಚಿರುವ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಸರಕಾರಿ ಲಸಿಕೆಯ ಬಾಟಲಿಗೆ ತಮ್ಮ ಫೊಟೋ ಅಂಟಿಸಿ ಹಣಕ್ಕೆ ಮಾರಿಕೊಂಡಿದ್ದ ಸಂಸದ ತೇಜಸ್ವಿ ಸೂರ್ಯ, ಈಗ ಬಿಜೆಪಿ ಬ್ಯಾನರ್ ಮುಂದೆ ನಿಂತು ರೇಷನ್ ಕಿಟ್‍ಗಳನ್ನು ಹಂಚಿದ್ದಾರೆಂದು ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕಾರ್ಮಿಕ ಇಲಾಖೆಯ ಕಿಟ್‍ಗಳಿಗೆ ತಮ್ಮ ಫೋಟೋ ಅಂಟಿಸಿ ಹಂಚಿದ್ದಾರೆ. ಈ ಬಿಜೆಪಿ ನಾಯಕರಿಗೆ ಅಧಿಕಾರದ ದುರ್ಬಳಕೆ ಮಾಡಿಕೊಳ್ಳುವುದಕ್ಕೂ ಒಂದು ಮಿತಿ ಬೇಡವೇ ಎಂದು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News