ಬೆಂಗಳೂರು: ಖರೀದಿಸುವ ಸೋಗಿನಲ್ಲಿ ದುಬಾರಿ ಕಾರಿನೊಂದಿಗೆ ಪರಾರಿ

Update: 2021-07-31 12:43 GMT

ಬೆಂಗಳೂರು, ಜು.31: ಖರೀದಿಸುವ ಸೋಗಿನಲ್ಲಿ  ದುಬಾರಿ ಕಾರಿನೊಂದಿಗೆ ಪರಾರಿಯಾದ ಘಟನೆ ನೆಲಮಂಗಲದಲ್ಲಿ ನಡೆದಿದೆ. 

ಜಕ್ಕಸಂದ್ರದ ಮಂಜು ಎಂಬಾತ ಕಾರು ಕದ್ದು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಜೆಪಿ ನಗರದ ವಾಣಿ ಅವರಿಗೆ ಸೇರಿದ 23 ಲಕ್ಷ ಬೆಲೆಬಾಳುವ ಕಾರಿಗೆ ಕೇವಲ 10 ಸಾವಿರ ರೂ. ಹಣ  ನೀಡಿ ಕಾರು ಸಮೇತ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ನೆಲಮಂಗಲ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News