ಸಂಪುಟ ವಿಸ್ತರಣೆ: ಇಂದು ಅಪರಾಹ್ನ 2:15ಕ್ಕೆ ನೂತನ ಸಚಿವರ ಪ್ರಮಾಣ ವಚನ: ಸಿಎಂ ಬೊಮ್ಮಾಯಿ

Update: 2021-08-04 04:40 GMT

ಬೆಂಗಳೂರು, ಆ.4: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರದ ನೂತನ ಸಚಿವ ಸಂಪುಟ ರಚನೆಗೆ ಮುಹೂರ್ತ ನಿಗದಿಯಾಗಿದ್ದು, ಇಂದು ಮಧ್ಯಾಹ್ನ 2:15ಕ್ಕೆ ರಾಜಭವನನದ ಗಾಜಿನ ಮನೆಯಲ್ಲಿ ನೂತನ  ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.

ಇಂದು ಬೆಳಗ್ಗೆ ಹೊಸದಿಲ್ಲಿಯಿಂದ ಮರಳಿದ ಬೊಮ್ಮಾಯಿ ಬೆಂಗಳೂರಿನ ಕೆಂಪೆಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.

ಸಂಪುಟ ವಿಸ್ತರಣೆಯ ಕುರಿತು ವರಿಷ್ಠರ ಸಭೆಯಲ್ಲಿ ಬಹುತೇಕ ವಿಚಾರಗಳು ಅಂತಿಮ ಹಂತಕ್ಕೆ ತಲುಪಿದ್ದು,  ನೂತನ ಸಚಿವರ ಅಧಿಕೃತ ಪಟ್ಟಿ ರಾಜಭವನದಿಂದ ಇಂದು 11 ಗಂಟೆ ಸುಮಾರಿಗೆ ಅಧಿಕೃತವಾಗಿ ಬಿಡುಗಡೆಯಾಗಲಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News