ಸೌರಾಷ್ಟ್ರದಲ್ಲಿ ಭಾರೀ ಮಳೆ,ಆರು ಜನರ ಸಾವು

Update: 2021-09-09 17:01 GMT

ರಾಜಕೋಟ್,ಸೆ.9: ಮಳೆಯಿಲ್ಲದೆ ತತ್ತರಿಸುತ್ತಿದ್ದ ಗುಜರಾತನ ಸೌರಾಷ್ಟ್ರದ ಹಲವಾರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಬೃಹತ್ ಬೆಳೆ ಹಾನಿಯ ಆತಂಕವನ್ನು ಎದುರಿಸುತ್ತಿದ್ದ ರೈತರಲ್ಲಿ ನೆಮ್ಮದಿಯನ್ನು ಮೂಡಿಸಿದೆ. ಇದೇ ವೇಳೆ ಭಾವನಗರದ ಪಲಿಟಾನ ಮತ್ತು ರಾಜಕೋಟ್‌ನ ಜಸ್ದಾನ್ ತಾಲೂಕುಗಳಲ್ಲಿ ಮಳೆ ಸಂಬಂಧಿತ ದುರ್ಘಟನೆಗಳಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ.

 ಬುಧವಾರ ಬೆಳಿಗ್ಗೆಯಿಂದಲೇ ರಾಜಕೋಟ್ ನಗರ ಮತ್ತು ಜಿಲ್ಲೆ,ಭಾವನಗರ,ಬೋಟಾಡ್,ಜುನಾಗಡ ಮತ್ತು ಅಮ್ರೇಲಿ ಜಿಲ್ಲೆಗಳಲ್ಲಿ ಗುಡುಗು-ಸಿಡಿಲಿನೊಂದಿಗೆ ಭಾರೀ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ನದಿಗಳು ಮತ್ತು ಹಳ್ಳಕೊಳ್ಳಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ರಾಜಕೋಟ್,ಅಮ್ರೇಲಿ ಮತ್ತು ಭಾವನಗರ ಜಿಲ್ಲೆಗಳ ತಗ್ಗುಪ್ರದೇಶಗಳಲ್ಲಿಯ 60 ಗ್ರಾಮಗಳಲ್ಲಿ ನೆರೆ ಕಟ್ಟೆಚ್ಚರವನ್ನು ಘೋಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News